ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಸತ್ಯಂ, ಮೇತಾಸ್ ಯೋಜನೆಗಳು

By Staff
|
Google Oneindia Kannada News

ಬೆಂಗಳೂರು, ಜ. 9 : ದೇಶದ ಪ್ರತಿಷ್ಠಿತ ನಾಲ್ಕನೇ ಅತಿ ದೊಡ್ಡ ಸಾಫ್ಟವೇರ್ ಕಂಪನಿ ಎನಿಸಿದ್ದ ಸತ್ಯಂ ನ ಮಾಜಿ ಚೇರಮನ್ ರಾಮಲಿಂಗರಾಜು ಅವರ ಪುತ್ರ ತೇಜರಾಜು ಮಾಲೀಕತ್ವದ ಮೇತಾಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ವಿವಿಧ ಬಹುಕೋಟಿ ರುಪಾಯಿಗಳ ಕಾಮಗಾರಿಗಳಲ್ಲಿ ಪಾಲುದಾರಿಕೆಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಸತ್ಯಂ ಹಗರಣದಿಂದ ರಾಜ್ಯದಲ್ಲಿ ಮೇತಾಸ್ ಕಂಪನಿ ನಡೆಸುತ್ತಿರುವ ಕಾಮಗಾರಿಗಳು ಕುಂಠಿತಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬೆಂಗಳೂರು ಮೇಲ್ಸೆತುವೆ ಕಾಮಗಾರಿ : ನಾಗಾರ್ಜುನ ಕನ್ ಸ್ಟ್ರಕ್ಷನ್ ಕಾರ್ಪೋರೇಶನ್, ಸೋಮ ಎಂಟರ್ ಪ್ರೈಸಸ್ ಲಿಮಿಟೆಡ್ ಹಾಗೂ ಮೇತಾಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಡೆಟ್ ನ ಸಹಭಾಗಿತ್ವದಲ್ಲಿ ಬೆಂಗಳೂರು- ಹೊಸೂರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ವರೆಗೆ ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಇದು 775 ಕೋಟಿ ರುಪಾಯಿಗಳ ಯೋಜನೆಯಾಗಿದೆ.

ವಿದ್ಯುತ್ ಉಪ ಘಟಕ:ಕರ್ನಾಟಕ ರಾಜ್ಯದ ವಿದ್ಯುತ್ ಇಲಾಖೆಯಲ್ಲಿನ ವಿದ್ಯುತ್ ಉಪ ಘಟಕಗಳ ನಿರ್ಮಾಣ ಕಾಮಗಾರಿಯನ್ನೂ ಮೇತೈಸ್ ಕಂಪನಿ ಕೈಗೆತ್ತಿಕೊಂಡಿದ್ದು. ಸುಮಾರು 67 ಕೋಟಿ ರುಪಾಯಿಗಳ ಯೋಜನೆ ಇದಾಗಿದೆ, ಮುಖ್ಯವಾಗಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಹಾಗೂ ಹುಬ್ಬಳ್ಳಿ ಗಳಲ್ಲಿ ಉಪವಿದ್ಯುತ್ ಘಟಕಗಳನ್ನು ನಿರ್ಮಿಸಲು ಯೋಜನೆಯ ಉದ್ದೇಶವಾಗಿದೆ.

ಮೆಟ್ರೋ ರೈಲು: ಬೆಂಗಳೂರು ಮೆಟ್ರೋ ರೈಲಿನ ಯೋಜನೆಯಲ್ಲಿ ಕೂಡ ಮೇತಾಸ್ ಕಂಪನಿ ಪಾಲುದಾರಿಕೆಯನ್ನು ಹೊಂದಿದ್ದು, ಮೆಟ್ರೋ ರೈಲಿನ ಗಡಿ ರೇಖೆ, ರಸ್ತೆ, ಚರಂಡಿ, ಕಂಬಗಳ ನಿರ್ಮಾಣದ ಹೊಣಿಯನ್ನು ಮೇತಾಸ್ ಕಂಪನಿ ಹೊತ್ತು ಕೊಂಡಿದೆ. ಮೆಟ್ರೋ ರೈಲಿಗೆ ಸಂಬಂಧಿಸಿದಂತೆ ಮೇತಾಸ್ ಕಂಪನಿಯೂ ಈಗಾಗಲೇ ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ಡಿಪೋವನ್ನು ತೆರೆದು ಕಾಮಗಾರಿ ಆರಂಭಿಸಿದೆ. ಈ ಕಾಮಗಾರಿಯ ಮೊತ್ತ ಸುಮಾರು 45 ಕೋಟಿ ರುಪಾಯಿಗಳು ಆಗಿದೆ.

ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದಲ್ಲೂ ಕೂಡ ಮೇತೈಸ್ ಕಂಪನಿ ತನ್ನ ಪಾಲುದಾರಿಕೆಯನ್ನು ಹೊಂದಿದ್ದು, 240 ಕೋಟಿ ರುಪಾಯಿಗಳ ಕಾಮಗಾರಿಯನ್ನು ಮಾಡಿದ್ದಾರೆ. ಅಲ್ಲದೇ ಐದೂವರೆ ಕಿಮೀ ಉದ್ದದ ಸಿರಾ ಬೈಪಾಸ್ ರಸ್ತೆಯ ಕಾಮಗಾರಿಯನ್ನು ಮೇತಾಸ್ ಕಂಪನಿ ಕಾಮಗಾರಿಯನ್ನು ಮುಗಿಸಿದೆ.

ವಿವಾದಿತ ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆ. ನಿರ್ಮಾಣದಲ್ಲಿ ಮೇತಾಸ್ ಕಂಪನಿಯ ಕೈಚಳಕವಿದೆ. ಪೆರಿಫೆರಲ್ ರಸ್ತೆ ನಿರ್ಮಾಣದಲ್ಲಿ ಈ ಕಂಪನಿ ಪಾಲುದಾರಿಕೆ ಪಡೆದು ಯೋಜನೆಯನ್ನು ಪೂರ್ಣಗೊಳಿಸಿದೆ. ಶಿವಮೊಗ್ಗ, ಗುಲ್ಬರ್ಗಾದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗ್ರೀನ್ ವಿಮಾನನಿಲ್ದಾಣ ಕಾಮಗಾರಿಯಲ್ಲಿ 110 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಸತ್ಯಂ ಸಿಎಫ್ಒ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನ?
ಮೇಟಾಸ್ ಇನ್ ಫ್ರಾ ಲಿ.ಅಧ್ಯಕ್ಷ ರಾಜೀನಾಮೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X