ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಖರೀದಿಸುವ ಆಲೋಚನೆ ಇಲ್ಲ: ಇನ್ಫಿ

By Staff
|
Google Oneindia Kannada News

ನವದೆಹಲಿ, ಜ.8: ಸತ್ಯಂ ಕಂಪ್ಯೂಟರ್ಸ್ ಕಂಪನಿಯನ್ನು ಖರೀದಿಸುವ ಯಾವುದೇ ಆಲೋಚನೆ ನಮಗಿಲ್ಲ ಎಂದು ಇನ್ಫೋಸಿಸ್ ನ ಮುಖ್ಯ ಸಲಹೆಗಾರರಾದ ಎನ್ ಆರ್ ನಾರಾಯಣ ಮೂರ್ತಿ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ನಾರಾಯಣಮೂರ್ತಿ ಮಾತನಾಡುತ್ತಾ, ''ಸತ್ಯಂ ಕಂಪ್ಯೂಟರ್ಸ್ ಗೆ ಆಗಿರುವ ಅನಿರೀಕ್ಷಿತ ಆಘಾತ ಭಾರತದ ಮಾಹಿತಿ ತಂತ್ರಜ್ಞಾನದ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ. ಪ್ರತಿಯೊಂದು ಕಂಪನಿ, ಮುಖ್ಯವಾಗಿ ಬೃಹತ್ ಕಂಪನಿಗಳು ತನ್ನ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಹೊಂದಿವೆ. ಸತ್ಯಂನಂತಹ ಒಂದು ಕಂಪನಿಯಿಂದ ಇಡೀ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂಬ ಮಾತಿನಲ್ಲಿ ಹುರುಳಿಲ್ಲ. ನಮ್ಮ ವ್ಯಾಪಾರ ವಹಿವಾಟುಗಳಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇದೆ'' ಎಂದರು.

ಐಟಿ ಉದ್ಯಮಗಳು ಹೂಡಿಕೆದಾರರು ಮತ್ತು ಗ್ರಾಹಕರೊಂದಿಗೆ ಮಾತನಾಡಿ, ಸತ್ಯಂ ಕಂಪನಿಯ ಘಟನೆ ಒಂದು ಪ್ರತ್ಯೇಕ ಘಟನೆ ಎಂದು ಸ್ಪಷ್ಟಪಡಿಸಬೇಕು. ಗ್ರಾಹಕರಿಗೆ ಈ ಬಗ್ಗೆ ಯಾವುದೇ ಭಯ ಬೇಡ ಎಂದು ಕಂಪನಿಗಳು ಶ್ರುತಪಡಿಸಬೇಕು. ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಲು ಕಂಪನಿಗಳು ಸಿದ್ಧವಾಗಬೇಕಿವೆ ಎಂದು ನಾರಾಯಣ ಮೂರ್ತಿ ತಿಳಿಸಿದರು.

(ಏಜೆನ್ಸೀಸ್)
ಪೂರಕ ಓದಿಗೆ:
ಸತ್ಯಂ ಸಿಇಒ ರಾಮಲಿಂಗರಾಜು ರಾಜೀನಾಮೆ
ಷೇರು ಮಾರುಕಟ್ಟೆಯಲ್ಲಿ ಪಾತಾಳ ಕಂಡ ಸತ್ಯಂ
ಸತ್ಯಂ ಅವ್ಯವಹಾರ ತನಿಖೆಗೆ ಕೇಂದ್ರ ಆಸಕ್ತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X