ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಂಡಿಚೆರಿ,ಯಶವಂತಪುರ ನಡುವೆ ಹೊಸ ರೈಲು
ಪಾಂಡಿಚರಿ, ಜ.3: ಪಾಂಡಿಚೆರಿ-ಯಶವಂತಪುರ ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸುವ ಗರೀಬ್ ರಥ್ ಎಕ್ಸಪ್ರೆಸ್ ರೈಲು ಶನಿವಾರದಿಂದ(ಜ.3) ಆರಂಭಗೊಳ್ಳಲಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಆರ್. ವೇಲು ಪುದುಚೇರಿಯಲ್ಲಿ ಇಂದು ಇದಕ್ಕೆ ಚಾಲನೆ ನೀಡಲಿದ್ದಾರೆ. ಆದರೆ ಮುಂದಿನ ಆದೇಶದವರೆಗೆ ವಾರಕ್ಕೆ ಒಂದು ಬಾರಿ ಮಾತ್ರ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ಶುಕ್ರವಾರ ರಾತ್ರಿ 11.15ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 9.20ಕ್ಕೆ ಪಾಂಡಿಚೆರಿ ತಲುಪಲಿದೆ. ಹಾಗೆ ಪ್ರತಿ ಶನಿವಾರ ರಾತ್ರಿ 10.30ಕ್ಕೆ ಪಾಂಡಿಚೆರಿಯಿಂದ ಹೊರಟು ಮರುದಿನ ಬೆಳಿಗ್ಗೆ 8.25ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ಅಟ್ಟೂರ, ಚಿನ್ನಸೇಲಂ, ವೃದ್ಧಾಚಲಂ ಜಂಕ್ಷನ್ ಮತ್ತು ವಿಲ್ಲುಪುರಂ ಮಾರ್ಗವಾಗಿ ಪಾಂಡಿಚೇರಿ ತಲುಪಲಿದೆ.
(ಏಜೆನ್ಸೀಸ್)
Comments
Story first published: Saturday, January 3, 2009, 11:18 [IST]