ಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ
ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ.
ಬಿಜೆಪಿ ಪಾಳೆಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ದೇವದುರ್ಗ ಕ್ಷೇತ್ರದಲ್ಲಿ ಶಿವನಗೌಡ ನಾಯಕ ಭಾರಿ ಮುನ್ನಡೆ ಕಾಯ್ದಕೊಂಡಿದ್ದಾರೆ. ಮಧುಗಿರಿಯ 6ಮೇ ಸುತ್ತಿನ ಮತ ಏಣಿಕೆ ನಂತರ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ 1730 ಮತಗಳ ಮುನ್ನೆಡೆ ಗಳಿಸಿದ್ದಾರೆ. ಕಾಂಗ್ರೆಸ್ ತನ್ನ ಖಾತೆ ಈ ವರೆಗೂ ತೆರೆದಿಲ್ಲ. ದೊಡ್ಡಬಳ್ಳಾಪುರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ವೆಂಕಟಾಚಲಯ್ಯ ನಂತಪ ಆ ಮುನ್ನೆಡೆಯನ್ನು ಬಿಜೆಪಿ ಅಭ್ಯರ್ಥಿ ನರಸಿಂಹಸ್ವಾಮಿ ಕಸಿದುಕೊಂಡಿದ್ದಾರೆ. ಮದ್ದೂರಿನಲ್ವಲಿ ಕಲ್ಪನಾ ಸಿದ್ದರಾಜು 4400 ಮತಗಳ ಮುನ್ನೆಡೆ ಗಳಿಸಿದ್ದಾರೆ. ಕಾರವಾರದಲ್ಲಿ ಅನಂತದ ಅಸ್ನೋಟಿಕರ್ 11085 ಮತಗಳ ಅಂತರದಿಂದ ಮುನ್ನೆಡೆ ಕಾಯ್ದುಕೊಂಡಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಅರಭಾವಿ
ಬಾಲಚಂದ್ರ
ಜಾರಕಿಹೊಳಿ
ದಿಗ್ವಿಜಯ
6
ಕ್ಷೇತ್ರಗಳಲ್ಲಿ
ಬಿಜೆಪಿಗೆ
ಆರಂಭಿಕ
ಮುನ್ನಡೆ