ಪಕ್ಷೇತರರನ್ನು ಕೈಬಿಡುವುದಿಲ್ಲ: ಯಡಿಯೂರಪ್ಪ
ಬೆಂಗಳೂರು, ಡಿ. 30 : ಸಂಪುಟದಲ್ಲಿರುವ ಪಕ್ಷೇತರರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅಪತ್ಕಾಲದಲ್ಲಿ ಅಪದ್ಭಾಂದವನಂತೆ ಸರ್ಕಾರ ರಚಿಸಲು ಬೆಂಬಲ ನೀಡಿರುವ ಪಕ್ಷೇತರ ಅಭ್ಯರ್ಥಿಗಳ ಹಿತವನ್ನು ಸರ್ಕಾರ ಕಾಯ್ದಕೊಂಡು ಹೋಗಲಿದೆ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಉಪಚುನಾವಣೆಯ ಎಂಟು ಕ್ಷೇತ್ರಗಳಲ್ಲಿ ಐದು ಸ್ಥಾನಗಳಲ್ಲಿ ಬಿಜೆಪಿ ವಶಪಡಿಸಿಕೊಂಡಿರುವ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಗಳನ್ನು ಸಂಪುಟ ಕೈಬಿಡಲಾಗುತ್ತಿದೆ ಎನ್ನುವ ಗಾಳಿ ಸುದ್ದಿಯನ್ನು ಅವರು ತಳ್ಳಿಹಾಕಿದರು. ಇದೊಂದು ಶುದ್ಧ ಸುಳ್ಳು. ಪಕ್ಷೇತರರು ಸರ್ಕಾರದ ಅವಿಬಾಜ್ಯ ಅಂಗ ಎಂದು ಪುನರುಚ್ಚರಿಸಿದರು. ಸಂಪುಟದಲ್ಲಿರುವ ನಾಲ್ಕು ಸಚಿವರೂ ಅರ್ಹ ಗೆಲುವು ಸಾಧಿಸಿರುವುದು ಸರ್ಕಾರದ ಜನಪರ ಕೆಲಸ ಹಾಗೂ ಅಭಿವೃದ್ಧಿ ಯೋಜನೆಗಳಿಂದ ಎಂದ ಮುಖ್ಯಮಂತ್ರಿಯವರು, ಸಚಿವರು ಕ್ಷೇತ್ರದ ಅಭಿವೃದ್ಧಿ ಹಗಲಿರುಳು ಶ್ರಮಿಸಿದ್ದರಿಂದ ಭಾರಿ ಅಂತರದ ಗೆಲುವು ಸಾಧಿಸುವುದು ಸಾಧ್ಯವಾಯಿತು ಎಂದರು.
ಉಪಚುನಾವಣೆಯಲ್ಲಿ ಐವರು ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಸ್ಥಿರ ಹಾಗೂ ಸುಭದ್ರ ಸರ್ಕಾರಕ್ಕೆ ಭದ್ರಬುನಾದಿಯಾಯಿತು. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಉತ್ತಮ ಆಡಳಿತ ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದರು. ಸಚಿವರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಆನಂದ ಅಸ್ನೋಟಿಕರ್ ಹಾಗೂ ಶಿವನಗೌಡ ನಾಯಕ ಭರ್ಜರಿ ಜಯಗಳಿಸಿದ್ದಾರೆ.
ದೊಡ್ಡಬಳ್ಳಾಪುರದಿಂದಲೂ ಜಾಲಪ್ಪ ಪುತ್ರ ಜೆ ನರಸಿಂಹಸ್ವಾಮಿ ಕೂಡ ಅರ್ಹ ಗೆಲುವು ದಾಖಲಿಸಿದ್ದಾರೆ. ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಎನ್ ನರೇಂದ್ರಸ್ವಾಮಿ, ವೆಂಕಟರಮಣಪ್ಪ ಹಾಗೂ ಶಿವರಾಜ್ ತಂಗಡಗಿ ಸರ್ಕಾರ ರಚಿಸಲು ಮಹತ್ವದ ಪಾತ್ರ ವಹಿಸಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಗೆದ್ದವರು
ಬಿದ್ದವರು:
ಮತಗಳಿಕೆ
ವಿವರ
ಕಮಲ
ಪಕ್ಷಕ್ಕೆ
ಪ್ಲೇವಿನ್
ಲಾಟರಿ
ಹೊಡಿತು
ಹುಕ್ಕೇರಿಯಲ್ಲಿ
ಉಮೇಶ್
ಕತ್ತಿ
ಭರ್ಜರಿ
ಜಯ
ಅರಭಾವಿ
ಬಾಲಚಂದ್ರ
ಜಾರಕಿಹೊಳಿ
ದಿಗ್ವಿಜಯ