ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಾಜ್ ಸ್ಫೋಟನಮ್ಮ ಗುರಿಯಾಗಿತ್ತು: ಉಗ್ರ'ವಾದ'
ಪೋಲೀಸರ ವಿಚಾರಣೆಯಲ್ಲಿ ಆತ ಕೆಲವೊಂದು ಮಹತ್ವದ ವಿಚಾರಗಳನ್ನು ಬಹಿರಂಗ ಪಡಿಸಿದ್ದಾನೆ. ''ಮುಂಬೈ ಸ್ಫೋಟದಲ್ಲಿ ಶಾಮೀಲಾಗಿರುವ ಉಗ್ರವಾದಿಗಳಿಗೆ ಲಷ್ಕರ್ ಇ ತೋಯ್ಬಾ ಮೂರು ತಿಂಗಳ ಕಾಲ ಶಿಕ್ಷಣ ನೀಡಿತ್ತು . ಕೊನೆಯ ಕ್ಷಣದವರೆಗೂ ಸಾಧ್ಯವಾದಷ್ಟು ಮಂದಿಯ ಪ್ರಾಣ ಹರಣ ಮಾಡುವುದು ನಮ್ಮ ಉದ್ದೇಶವಾಗಿತ್ತು. ನಾವು ಅಂದುಕೊಂಡಂತೆ ಬಹಳಷ್ಟು ಮಂದಿಯನ್ನು ಸಾಯಿಸಿದ್ದೇವೆ. ಇನ್ನು ನಾನು ಸತ್ತರೂ ಚಿಂತೆಯಿಲ್ಲ'' ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಫರೀದ್ ಕೋಟ್ ನಿಂದ ತಾನು ಭಾರತಕ್ಕೆ ಆಗಮಿಸಿರುವುದಾಗಿ 21 ವರ್ಷದ ಈ ಉಗ್ರವಾದಿ ಹೇಳಿದ್ದಾನೆ. ಸ್ಫೋಟ ಸಂಭವಿಸಿದ ದಿನ ಈತ ಮತ್ತಿಬ್ಬರು ಉಗ್ರರೊಂದಿಗೆ ಸೇರಿ ಗುಂಡಿನ ದಾಳಿ ನಡೆಸಿದ್ದ. ನಂತರ ಮೆಟ್ರೊದಲ್ಲೂ ಗುಂಡಿನ ದಾಳಿ ನಡೆಸಿ ಅಲ್ಲಿಂದ ಸ್ಕೋಡಾ ಕಾರಿನಲ್ಲಿ ಗಿರ್ ಗಾವ್ ಚೌಪಟ್ಟಿಗೆ ಓಡಿ ಹೋಗಿದ್ದ. ಅಲ್ಲೇಈ ಉಗ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು. ಈ ಉಗ್ರನಿಂದ ಮತ್ತಷ್ಟು ಮುಖ್ಯ ವಿಚಾರಗಳು ಬೆಳಕಿಗೆ ಬರಲಿವೆ.
(ಏಜೆನ್ಸೀಸ್)
Comments
Story first published: Saturday, November 29, 2008, 14:44 [IST]