ಮೈಸೂರಿನಲ್ಲಿ ವಿಪ್ರೊ ಕಾರ್ಮಿಕ ಆತ್ಮಹತ್ಯೆ
ಮೈಸೂರು, ನ. 25 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಪ್ರೊ ಕಂಪನಿ ಲೈಟಿಂಗ್ ವಿಭಾಗದ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ತಿಂಗಳಾಗುತ್ತಾ ಬಂದರೂ ಕ್ಯಾರೇ ಎನ್ನದ ಆಡಳಿತ ಮಂಡಳಿಯ ಕ್ರಮದಿಂದ ಬೇಸತ್ತು ಪ್ರತಿಭಟನಾ ನಿರತ ಕಾರ್ಮಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.
ಹನುಮಂತ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ. ವಿಪ್ರೊ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಲೈಟಿಂಗ್ ವಿಭಾಗದ ಕಾರ್ಮಿಕರಿಗೆ ಕಂಪನಿಯೂ ತಿಂಗಳಿಗೆ 3500 ರು.ಗಳನ್ನು ನೀಡುತ್ತದೆ. ಜೀವನಾಂಶಕ್ಕೆ ಇಷ್ಟು ಕಡಿಮೆ ಸಂಬಳ ಸಾಲುವುದಿಲ್ಲ ಎಂದು ಕಾರ್ಮಿಕರು ಅನೇಕ ಬಾರಿ ಮನವಿ ಮಾಡಿಕೊಂಡರೂ ಆಡಳಿತ ಮಂಡಳಿ ಕಾರ್ಮಿಕರ ಅಳಲನ್ನು ಕಿವಿಗೆ ಹಾಕಿಕೊಂಡಿಲ್ಲ.
ಇದರಿಂದ
ಬೇಸತ್ತು
ಕಾರ್ಮಿಕರು
ಕಳೆದ
ದೀಪಾವಳಿ
ಹಬ್ಬದಿಂದ
ಅನಿರ್ಧಿಷ್ಟಾವಧಿ
ಪ್ರತಿಭಟನೆಯನ್ನು
ಹಮ್ಮಿಕೊಂಡಿದ್ದಾರೆ.
ಪ್ರತಿಭಟನೆ
ತಿಂಗಳಾಗುತ್ತಾ
ಬಂದರೂ
ಕಂಪನಿಯ
ಆಡಳಿತ
ಮಂಡಳಿ
ಕಾರ್ಮಿಕರ
ಸಮಸ್ಯೆಯನ್ನು
ಆಲಿಸಿಲ್ಲ.
ಇದರಿಂದ
ಮನನೊಂದಿರುವ
ಕಾರ್ಮಿಕ
ಹನುಮಂತ
ಶೆಟ್ಟಿ
ಕಂಪನಿಯ
ಎದುರೆ
ಸೇವಿಸಿ
ಆತ್ಮಹತ್ಯೆ
ಮಾಡಿಕೊಂಡಿದ್ದಾನೆ
ಎಂದು
ಪೊಲೀಸರು
ತಿಳಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)