ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದಾಚಾರ್ಯ ಮತ್ತೆ ರಾಜಕಾರಣಕ್ಕೆ

By Staff
|
Google Oneindia Kannada News

Govindacharya
ನವದೆಹಲಿ, ನ. 18 : ಆರ್ಎಸ್ಎಸ್ ಸಿದ್ದಾ೦ತವಾದಿ ಗೋವಿಂದಾಚಾರ್ಯಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರುಳುತ್ತಿದ್ದಾರೆ. ಬರುವ ಮಕರ ಸಂಕ್ರಾಂತಿ ದಿನದಂದು ಹೊಸ ಪಕ್ಷಕ್ಕೆ ನಾಂದಿ ಹಾಡಲಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈಗಿರುವ ಎರಡು ರಾಷ್ಟ್ರೀಯ ಪಕ್ಷಗಳು ಶ್ರೀಮಂತರ, ಅಲ್ಪಸಂಖ್ಯಾತರ ಮತ್ತು ವಿದೇಶಿ ಶಕ್ತಿಗಳ ಕೈವಶದಲ್ಲಿದೆ. ಭಯೋತ್ಪಾದನೆಯಿಂದ ನಲುಗುತ್ತಿರುವ ದೇಶಕ್ಕೆ ಶಾಂತಿ, ಸಾಮರಸ್ಯದ ವಾತಾವರಣ ಸೃಷ್ಟಸಬೇಕಿದೆ. ಬಡತನವನ್ನು ನಿರ್ಮೂಲನೆ ಮಾಡುವ ಕೆಲಸದ ತುರ್ತಾಗಿ ಆಗಬೇಕಿದೆ. ಈ ಎಲ್ಲ ಕೆಲಸಗಳನ್ನು ಮಾಡುವಂತ ಪಕ್ಷದ ಅಗತ್ಯ ದೇಶಕ್ಕೆ ಇದೆ ಎಂದರು. ಉಮಾಭಾರತಿ ನೇತೃತ್ವದ ಭಾರತೀಯ ಜನಶಕ್ತಿ ಪಕ್ಷ ಇದಕ್ಕೆ ಪರ್ಯಾಯ ಪಕ್ಷವಾಗಿದ್ದರೂ ರಾಷ್ಟ್ರ ಮಟ್ಟದಲ್ಲಿ ಈ ಕೆಲಸ ಆಗಬೇಕಿದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X