ಅಧಿಕಾರಿಗಳ ಮೇಲೆ ಸಿದ್ಧರಾಮಯ್ಯ ಸಿಡಿಮಿಡಿ
ಮೈಸೂರು, ನ.13: ಬಹಳಷ್ಟು ಅಧಿಕಾರಿಗಳಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಪ್ರಾಮುಖ್ಯತೆಯ ಅರಿವು ಇಲ್ಲದಿರುವುದು ವಿಷಾದನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರದಂದು ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೈಸೂರು ತಾಲ್ಲೂಕುಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಅಧಿಕಾರಿಗಳು ಸರ್ಕಾರವು ವಿವಿಧ ಯೋಜನೆಗಳಡಿಯಲ್ಲಿ ನೀಡಿದ ಆರ್ಥಿಕ ಅನುದಾನ, ಕಾರ್ಯಕ್ರಮಗಳ ಗುರಿ, ಸಾಧನೆ ಎಲ್ಲ ಮಾಹಿತಿಗಳನ್ನು ಮುಂಚಿತವಾಗಿಯೇ ಸಭೆಗೆ ಒದಗಿಸಬೇಕು. ಯಾವುದೇ ಕಾರಣದಿಂದ ಅಪೂರ್ಣ ಮಾಹಿತಿ ನೀಡಬಾರದು. ಈ ಮಾಹಿತಿಗಳ ಬಗ್ಗೆ ತ್ರೈಮಾಸಿಕ ಸಭೆಯಲ್ಲಿ ವಿವರ ಚರ್ಚೆ ಆಗಬೇಕು. ಸಾಧನೆಗಳ ವೈಫಲ್ಯಕ್ಕೆ ಕಾರಣ ತಿಳಿದು, ಸಭೆಯಲ್ಲಿ ಪರಿಹಾರದ ಬಗ್ಗೆ ಚರ್ಚಿಸಲು ಅನುಕೂಲವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೊನೆಗೂ ಹೊರ ಬಂದ ಮಾಹಿತಿ:ಮೈಸೂರು ತಾಲ್ಲೂಕಿನಲ್ಲಿ ವಾಡಿಕೆ ಮಳೆ 719 ಮಿಲಿಮೀಟರ್ ಇದ್ದು , ಅಕ್ಟೋಬರ್ ಅಂತ್ಯದವರೆಗೆ 887 ಮಿಲಿಮೀಟರ್ ಮಳೆ ಆಗಿದೆ. ಆದರೆ ಮಳೆ ಪ್ರಮಾಣ ಸಮರ್ಪಕವಾಗಿ ಹಂಚಿಕೆ ಆಗಿಲ್ಲ. ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ವಾಡಿಕೆ ಮಳೆ ಆಗಿರುವುದಿಲ್ಲ. 13,248 ಹೆಕ್ಟೇರ್ಗಳಲ್ಲಿ ಬೆಳೆ ಬೆಳೆಯಬೇಕಿದ್ದು, 10,485 ಹೆಕ್ಟೇರ್ನಲ್ಲಿ ಬಿತ್ತನೆ ಆಗುವ ಮೂಲಕ ಶೇ.79 ಬಿತ್ತನೆ ಆಗಿದೆ. ಪಶುಸಂಗೋಪನಾ ಇಲಾಖೆಯಲ್ಲಿ ಅಕ್ಟೋಬರ್ ಅಂತ್ಯವರೆಗೆ 15,900 ಜಾನುವಾರುಗಳನ್ನು ಕೃತಕ ಗರ್ಭದಾರಣೆಗೆ ಒಳಪಡಿಸಬೇಕಿದ್ದು 15,707 ಜಾನುವಾರುಗಳನ್ನು ಕೃತಕ ಗರ್ಭಧಾರಣೆಗೆ ಒಳಪಡಿಸಲಾಗಿತ್ತು ಎಂದು ಸಭೆಗೆ ಮಾಹಿತಿ ನೀಡಲಾಯಿತು.
ತಾಲ್ಲೂಕಿನಲ್ಲಿ ರೇಷ್ಮೆ ಇಲಾಖೆಗೆ 100 ಟನ್ ರೇಷ್ಮೆಗೂಡು ಬೆಳೆಯುವ ಗುರಿ ಇದ್ದು 89 ಟನ್ ರೇಷ್ಮೆಗೂಡು ಬೆಳೆದು ಸಾಧನೆ ಮಾಡಲಾಗಿದೆ. 50 ಮೆಟ್ರಿಕ್ ಟನ್ ಬೈವೋಲ್ಟೇನ್ ತಳಿ ರೇಷ್ಮೆಗೂಡು ಬೆಳೆಯುವ ಗುರಿಗೆ ಬದಲಾಗಿ 48 ಮೆಟ್ರಿಕ್ ಟನ್ ಬೈವೋಲ್ಟೇನ್ ರೇಷ್ಮೆಗೂಡು ಬೆಳೆಯಲಾಗಿದೆ. ತಾಲ್ಲೂಕಿನಲ್ಲಿ ಒಟ್ಟಾರೆ 719 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ ಬೆಳೆಯಲಾಗುತ್ತಿದೆ. ವಿಶೇಷ ಘಟಕಯೋಜನೆಯಡಿ ರೇಷ್ಮೆ ಬೆಳೆಗಾರ ಫಲಾನುಭವಿಗಳಿಗೆ 1.50 ಲಕ್ಷ ರು.ಗಳ ನೆರವು ಒದಗಿಸಬೇಕಿದ್ದು , ಅದರಲ್ಲಿ 80ಸಾವಿರ ರುಗಳ ಅನುದಾನ ಬಿಡುಗಡೆಯಾಗಿದೆ ಎಂದು ಸಭೆಗೆ ವಿವರ ನೀಡಲಾಯಿತು.
ಪ್ರಗತಿ
ಪರಿಶೀಲನಾ
ಸಭೆಯಲ್ಲಿ
ಚಾಮುಂಡೇಶ್ವರಿ
ವಿಧಾನಸಭಾ
ಕ್ಷೇತ್ರದ
ಶಾಸಕ
ಎಂ.
ಸತ್ಯನಾರಾಯಣ,
ಜಿಲ್ಲಾ
ಪಂಚಾಯತ್
ಅಧ್ಯಕ್ಷ
ಕೆ.
ಮರಿಗೌಡ,
ತಾಲ್ಲೂಕು
ಪಂಚಾಯತ್
ಅಧ್ಯಕ್ಷರು,
ಉಪಾಧ್ಯಕ್ಷರು,
ಸದಸ್ಯರು,
ಜಿಲ್ಲಾ
ಪಂಚಾಯತ್
ಸದಸ್ಯರು,
ಎಲ್ಲ
ಅಧಿಕಾರಿಗಳು
ಉಪಸ್ಥಿತರಿದ್ದರು.
(ದಟ್ಸ್
ಕನ್ನಡ
ವಾರ್ತೆ)