ಉಡುಪಿ ಮಠದ ಅನ್ನಬ್ರಹ್ಮಕ್ಕೆ ಧನಬ್ರಹ್ಮ
ಉಡುಪಿ , ನ. 13 :ಶ್ರೀ ಕೃಷ್ಣ ದೇವಾಲಯದ "ಅನ್ನಬ್ರಹ್ಮ" ಯೋಜನೆಗೆ ಸರಕಾರದಿಂದ 1.25 ಕೋಟಿ ರುಪಾಯಿ ಬಿಡುಗಡೆ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ. ದೇವಾಲಯದಲ್ಲಿ ಅಂದಾಜು 3.5 ಕೋಟಿ ರುಪಾಯಿ ವೆಚ್ಚದಲ್ಲಿ ಬಹು ಅಂತಸ್ತಿನ ಭೋಜನ ಗೃಹಕ್ಕೆ ಬುಧವಾರ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಜನಾರ್ಧನ ರೆಡ್ಡಿ, ತಮ್ಮ ನನ್ನ ಕಿಸೆಯಿಂದ 25 ಲಕ್ಷ ರುಪಾಯಿ ನೀಡುವುದಾಗಿ ಪ್ರಕಟಿಸಿದ್ದಾರೆ.
ಉಡುಪಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸುತ್ತಿದ್ದು, ಗೋವಾ ಗಡಿ ಇಂದ ಕೇರಳದ ಗಡಿಯ ವರೆಗೆ " ಕರಾವಳಿ ಕಾರಿಡಾರ್' ಎನ್ನುವ ಯೋಜನೆಯು ಸಿದ್ದಗೊಳ್ಳುತ್ತಿದೆ. ಈ ಕಾರಿಡಾರ್ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಪ್ರದೇಶಗಳಲ್ಲಿ ಹಾದುಹೋಗಲಿದೆ.
ಅನ್ನಬ್ರಹ್ಮ ಯೋಜನೆ ಸೆಪ್ಟೆಂಬರ್ 2009ರ ವೇಳೆಗೆ ಪೂರ್ಣಗೊಳ್ಳಲಿದೆ. ಮಣಿಪಾಲ ವಿಶ್ವ ವಿದ್ಯಾಲಯದ ಕುಲಪತಿ ರಾಮದಾಸ್ ಪೈ ಅವರು 15 ಲಕ್ಷ ರೂಪಾಯಿಯ ದೇಣಿಗೆಯನ್ನು ಈ ಯೋಜನೆಗೆ ನೀಡಿದ್ದಾರೆ. ಭೋಜನ ಗೃಹ ಶಂಕುಸ್ಥಾಪನೆ ಸಂದರ್ಭದಲ್ಲಿ ಪರ್ಯಾಯ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)