ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನ.27 ವಿಚಾರಣೆ
ಬೆಂಗಳೂರು, ನ. 13 : ಕನ್ನಡ ಹಾಗೂ ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಅಂತಿಮ ವಿಚಾರಣೆ ನವೆಂಬರ್ 27 ರಂದು ನಡೆಯಲಿದೆ.
ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಗಂಗೂಲಿ ಹಾಗೂ ನ್ಯಾಯಮೂರ್ತಿ ಇಬ್ರಾಹಿಂ ಖಲೀಪುಲ್ಲಾ ಅವರನ್ನು ಒಳಗೊಂಡಿರುವ ನ್ಯಾಯಪೀಠ ಕನ್ನಡ ಮತ್ತು ತೆಲುಗು ಭಾಷೆಗೆ ಕನ್ನಡ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ 27 ರಂದು ಅಂತಿಮ ವಿಚಾರಣೆ ನಡೆಸಲಿದ್ದಾರೆ. ಈ ಕುರಿತಂತೆ ತಮಿಳುನಾಡಿನ ಆರ್. ಗಾಂಧಿ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಕನ್ನಡ ಹಾಗೂ ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಅರ್ಹತೆಯನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕರ್ನಾಟಕದ
ದೀಪಕ್
ತಿಮ್ಮಯ್ಯ
ಎಂಬುವವರು
ಮದ್ರಾಸ್
ಹೈಕೋರ್ಟ್
ಪ್ರತಿ
ದಾವೆ
ಹೂಡಿ
ಆರ್
ಗಾಂಧಿ
ಎಂಬುವವರು
ಶಾಸ್ತ್ರೀಯ
ಸ್ಥಾನಮಾನಕ್ಕೆ
ಸಂಬಂಧಿಸಿದಂತೆ
ದಾಖಲಿಸಿರುವ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಯನ್ನು
ವಜಾಗೊಳಿಸಬೇಕು
ಎಂದು
ನ್ಯಾಯಾಲಯಕ್ಕೆ
ಮನವಿ
ಮಾಡಿಕೊಂಡಿದ್ದರು.
ಕರ್ನಾಟಕ
ರಾಜ್ಯೋತ್ಸವಕ್ಕೆ
ಮುನ್ನ
ಅ.
29
ರಂದು
ಕೇಂದ್ರ
ಸಚಿವೆ
ಅಂಬಿಕಾ
ಸೋನಿ
ಅವರು
ಕನ್ನಡ
ಮತ್ತು
ತೆಲುಗು
ಭಾಷೆಗಳಿಗೆ
ಶಾಸ್ತ್ರೀಯ
ಭಾಷೆಗಳು
ಎಂದು
ಘೋಷಣೆ
ಮಾಡಿದ್ದರು.
ಈ
ಹಿನ್ನೆಲೆಯಲ್ಲಿ
ನ್ಯಾಯಾಲಯದಲ್ಲಿರುವ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಯ
ಅಂತಿಮ
ಆದೇಶದೆಡೆಗೆ
ಎಲ್ಲರ
ಗಮನ
ಕೇಂದ್ರಿಕರಿಸಿದೆ.
(ದಟ್ಸ್
ಕನ್ನಡ
ವಾರ್ತೆ)