ಪೇಜಾವರ ಶ್ರೀಗಳಿಗೆ ವಿಚಾರ ವೇದಿಕೆ ಸವಾಲು
ಬೆಂಗಳೂರು, ನ.10:''ಪೇಜಾವರ ಶ್ರೀಗಳಿಗೆ ದಲಿತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಡಿಸೆಂಬರ್ 6 ರಂದು ದಲಿತ ಸಮುದಾಯದವರೊಂದಿಗೆ ಕುಳಿತು ಸಹಭೋಜನ ಮಾಡಲಿ'' ಎಂದು ಡಾ. ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ಸವಾಲು ಹಾಕಿದೆ.ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬ್ರಾಹ್ಮಣರ ಜೊತೆ ಶೂದ್ರರಿಗೆ ಮತ್ತು ದಲಿತರಿಗೆ ಭೋಜನ ವ್ಯವಸ್ಥೆ ಮಾಡಿ ದಲಿತರನ್ನು ಮತ್ತು ಹಿಂದುಳಿದವರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಬೇಡಿ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದರು.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶೂದ್ರರಿಗೆ ಮತ್ತು ದಲಿತರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡುವ ಪದ್ಧತಿ ಮಠದಲ್ಲಿ ಇರುವುದರಿಂದ ಸ್ವಾಮೀಜಿಯವರಿಗೆ ಹಿಂದೂಗಳು, ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವೇದಿಕೆ ತೀವ್ರವಾಗಿ ಖಂಡಿಸಿದೆ.ಹಿಂದೂಗಳೆಲ್ಲಾ ಒಂದೇ ಎಂದು ಹೇಳುವ ಪೇಜಾವರ ಶ್ರೀಗಳು ಎಷ್ಟು ಬ್ರಾಹ್ಮಣೇತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಪತ್ರಕರ್ತೆ ಗೌರಿ ಲಂಕೇಶ್ ಆಗ್ರಹಿಸಿದ್ದಾರೆ.
ಇದೇ
ವೇಳೆ
ಮಾತನಾಡಿದ
ವೇದಿಕೆ
ಅಧ್ಯಕ್ಷ
ಬಿ.ಎಸ್.
ಶಿವಣ್ಣ,
ಉಡುಪಿ
ಶ್ರೀಕೃಷ್ಣ
ದೇವಾಲಯವು
ಮುಜರಾಯಿ
ಇಲಾಖೆಗೆ
ಸೇರಿದ್ದು.
ವಾಸ್ತವ
ಹೀಗಿದ್ದರೂ,
ನೀವು
ಅದನ್ನು
ನಿಮ್ಮ
ಸ್ವಂತ
ಆಸ್ತಿ
ಎಂಬಂತೆ
ಪ್ರತಿಪಾದಿಸುತ್ತಿದ್ದೀರಿ.
ನಿಮಗೆ
ದಲಿತರ
ಬಗ್ಗೆ
ನಿಜವಾದ
ಕಾಳಜಿ
ಇದ್ದಲ್ಲಿ
ಉಡುಪಿ
ಶ್ರೀ
ಕೃಷ್ಣ
ಮಠಕ್ಕೆ
ದಲಿತರೊಬ್ಬರನ್ನು
ಅರ್ಚಕರನ್ನಾಗಿ
ನೇಮಿಸಿ
ಎಂದು
ಸವಾಲು
ಹಾಕಿದರು.
(ದಟ್ಸ್
ಕನ್ನಡ
ವಾರ್ತೆ)