ರೈಲ್ವೇ ಇಲಾಖೆಯ ಡಿ ಗ್ರೂಪ್ ನೇಮಕಾತಿ ರದ್ದು
ಬೆಂಗಳೂರು, ಅ. 19 : ರೈಲ್ವೇ ಇಲಾಖೆ ರಾಜ್ಯದಲ್ಲಿ ನಡೆಸಲು ಉದ್ದೇಶಿಸಿದ್ದ ಡಿ ಗ್ರೂಪ್ ನೌಕರರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಪರ ಸಂಘಟನೆಗಳು ಮಾಡಿದ ಹೋರಾಟ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಕನ್ನಡಿಗರಿಗೆ ಇಂತಿಷ್ಟೇ ಶೇಕಡವಾರು ಸೀಟುಗಳನ್ನು ನಿಗದಿ ಮಾಡಬೇಕು ಎಂದು ಮೈಸೂರು ಹಾಗೂ ಹುಬ್ಬಳಿಯ ವಿಭಾಗೀಯ ರೈಲ್ವೇ ವ್ಯವಸ್ಥಾಪಕರು ಸೂಚಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾರಣವನ್ನು ನೀಡಿ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡುವಂತೆ ಸಲಹೆ ನೀಡಿದ್ದಾರೆ.
ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಬಿಹಾರ ರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚಿನ ಹುದ್ದೆಗಳನ್ನು ನೀಡಿದ್ದನ್ನು ಖಂಡಿಸಿ, ಕರವೇ ಹಾಗೂ ಇತರೆ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.
(ದಟ್ಸ್
ಕನ್ನಡ
ವಾರ್ತೆ)
ನಗರದ
ರೈಲ್ವೇ
ನಿಲ್ದಾಣ
ಅಭಿವೃದ್ಧಿಗೆ
ಚೀನಾ
ತಂಡ
ಮೈಸೂರು
ರೈಲ್ವೆ
ನಿಲ್ದಾಣ
:
ವಾಹನ
ನಿಲುಗಡೆ
ದರ
ಏರಿಕೆ
ಕನ್ನಡಿಗರ
ಹೆಜ್ಜೆ
ಮುಂದಕ್ಕೆ;
ರೈಲ್ವೆ
ಇಲಾಖೆ
ಹಿಂದಕ್ಕೆ
ಫೆ.
24:ರಾಜ್ಯಾದ್ಯಂತ
ರೈಲ್ವೆ
ನಿಲ್ದಾಣಗಳ
ಮುತ್ತಿಗೆ