ತ್ವರಿತ ಅಲರ್ಟ್ ಗಳಿಗಾಗಿ
For Daily Alerts
'ಗೋಕರ್ಣ ವಿವಾದ ಸೌಹಾರ್ದಯುತವಾಗಿ ಬಗೆಹರಿಸಿ'
ಶಿರಸಿ, ಅ.18: ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ವಿಷಯವನ್ನು ಸರಕಾರ ಸೌಹಾರ್ದಯುತವಾಗಿ ಪರಿಹರಿಸುವಂತೆ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಗಳು ಒತ್ತಾಯಿಸಿದ್ದಾರೆ.
ಶ್ರೀಮಠದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ್ತಿದ್ದ ಅವರು, ಗೋಕರ್ಣ ಭಕ್ತಿ, ಶ್ರದ್ಧೆಗಳ ಸ್ಥಳ ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರ. ಹಸ್ತಾಂತರ ವಿಷಯವನ್ನುಸಂಕೀರ್ಣಗೊಳಿಸದೆ ಶಾಂತಿಯುತವಾಗಿ ಬಗೆಹರಿಸಬೇಕಾಗಿದೆ. ಹಾಗೆಯೇ ಗಲಭೆಗಳಿಗೆ ಅವಕಾಶ ನೀಡದಂತೆ ಪರಿಹರಿಸಬೇಕಾಗಿದೆ ಎಂದರು.
ಮಾಲೀಕತ್ವದ ಬಗ್ಗೆ ಗೊಂದಲ ಹಾಗೂ ಗಲಭೆ ಸೃಷ್ಟಿಸುವುದು ಪ್ರತಿಷ್ಠಿತ ರಾಮಚಂದ್ರಾಪುರ ಮಠಕ್ಕೆ ಘನತೆ ತರುವುದಿಲ್ಲ ಎಂದು ಸ್ವರ್ಣವಲ್ಲಿ ಶ್ರೀಗಳು ಪ್ರತಿಕ್ರಿಯಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, October 18, 2008, 14:17 [IST]