ರಾಜ್ಯಕ್ಕೆ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ
ಬೆಂಗಳೂರು, ಅ.16: ಮುಂಬೈ ಮೂಲದ ಪ್ರತಿಷ್ಠಿತ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಗೆ(Tata Institute of Fundamental Research) 19.13 ಎಕರೆಗಳಷ್ಟು ಸ್ಥಳ ನೀಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಮೂಲಕ ಪ್ರಸಿದ್ಧ ಟಾಟಾ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲೂ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸಚಿವ ಸಂಪುಟದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವೆ, ಸರಕಾರ 19.13 ಎಕರೆ ಸ್ಥಳವನ್ನು ಸಂಸ್ಥೆಗಾಗಿ ದೀರ್ಘಾವಧಿ ಗುತ್ತಿಗೆಗೆ ನೀಡುತ್ತಿದೆ. ಎಕರೆಗೆ 100 ರು.ಗಳ ನಾಮಮಾತ್ರದ ಬಾಡಿಗೆ ಪಡೆಯಲಾಗುತ್ತದೆ. ಬೆಂಗಳೂರಿನ ಹೊರವಲಯದಲ್ಲಿರುವ ಹೆಸರಘಟ್ಟ ಬಳಿ ಸ್ಥಳ ಮಂಜೂರು ಮಾಡಿರುವುದಾಗಿ ತಿಳಿಸಿದರು.
ಕರ್ನಾಟಕ
ತೋಟಗಾರಿಕಾ
ಅಭಿವೃದ್ಧಿ
ಏಜೆನ್ಸಿ
ಸ್ಥಾಪನೆ
''ದೇಶದ
ಪ್ರತಿಷ್ಠಿತ
ಸಂಶೋಧನಾ
ಸಂಸ್ಥೆ
ನಮ್ಮ
ರಾಜ್ಯದಲ್ಲಿ
ತನ್ನ
ಚಟುವಟಿಕೆಗಳನ್ನು
ವಿಸ್ತರಿಸಿರುವುದು
ರಾಜ್ಯದ
ಘನತೆಯನ್ನು
ಮತ್ತಷ್ಟು
ಹೆಚ್ಚಿಸುತ್ತದೆ.
ಈ
ಸಂಶೋಧನಾ
ಸಂಸ್ಥೆ
ಬಹಳಷ್ಟು
ವಿಜ್ಞಾನಿಗಳನ್ನು
ಹುಟ್ಟುಹಾಕಿದೆ''
ಎಂದು
ಸಚಿವೆ
ಸಂತೋಷ
ವ್ಯಕ್ತಪಡಿಸಿದರು.
ಹಾಗೆಯೇ
ಕರ್ನಾಟಕ
ತೋಟಗಾರಿಕಾ
ಅಭಿವೃದ್ಧಿ
ಏಜೆನ್ಸಿ
ಸ್ಥಾಪಿಸಲು
ಇಂದಿನ
ಸಚಿವ
ಸಂಪುಟದಲ್ಲಿ
ನಿರ್ಧರಿಸಲಾಯಿತು.
17,732
ಎಕರೆ
ಒಕ್ಕಲು
ಜಮೀನನ್ನು
ರಾಜ್ಯ
ತೋಟಗಾರಿಕಾ
ಇಲಾಖೆಯ
ನೆರವಿನೊಂದಿಗೆ
ಅಭಿವೃದ್ಧಿಪಡಿಸುತ್ತೇವೆ.
ನರ್ಸರಿ
ಮೂಲಕ
ಸಸಿಗಳನ್ನು
ಅಭಿವೃದ್ಧಿಪಡಿಸುವುದು,
ಸಂಶೋಧನೆಯನ್ನು
ಏಜೆನ್ಸಿ
ಮೂಲಕ
ಕೈಗೊಳ್ಳಲಾಗುತ್ತದೆ
ಎಂದು
ತಿಳಿಸಿದರು.
ಎಲೆಕ್ಟ್ರಾನಿಕ್
ಸಿಟಿ
ಬಳಿ
ಬಯೋಟೆಕ್
ಪಾರ್ಕ್
ರಾಜ್ಯ
ಹಾಗೂ
ಕೇಂದ್ರ
ಸರಕಾರಗಳ
ಜಂಟಿ
ಸಹಯೋಗದಲ್ಲಿ
ಎಲಕ್ಟ್ರಾನಿಕ್
ಸಿಟಿಯಲ್ಲಿ
ಬಯೋಟೆಕ್
ಪಾರ್ಕನ್ನು
ಸ್ಥಾಪಿಸಲು
ಸಚಿವ
ಸಂಪುಟ
ಸಭೆಯಲ್ಲಿ
ನಿರ್ಧರಿಸಲಾಯಿತು.
ಬಯೋಟೆಕ್
ಪಾರ್ಕ್
ಅಭಿವೃದ್ಧಿಗಾಗಿ
ಸರಕಾರ
ರು.103
ಕೋಟಿಗಳನ್ನು
ವೆಚ್ಚ
ಮಾಡಲಿದೆ.
ಹೂವಿನಹಡಗಲಿಯಲ್ಲಿರುವ
ಸರಕಾರಿ
ಇಂಜಿನಿಯರಿಂಗ್
ಕಾಲೇಜನ್ನು
ಜಿಲ್ಲಾ
ಕೇಂದ್ರ
ಬಳ್ಳಾರಿಗೆ
ವರ್ಗಾಯಿಸಲು
ಸಂಪುಟ
ಸಭೆಯಲ್ಲಿ
ತೀರ್ಮಾನಿಸಲಾಯಿತು
ಎಂದು
ಸಚಿವೆ
ವಿವರಗಳನ್ನು
ನೀಡಿದರು.
(ದಟ್ಸ್
ಕನ್ನಡ
ವಾರ್ತೆ)
ರೈಲ್ವೆ
ಕೋಚ್
ಕಾರ್ಖಾನೆ
ಸ್ಥಾಪನೆಗೆ
ಸರ್ಕಾರ
ಯತ್ನ