ಸಂಧ್ಯಾ ಸುರಕ್ಷಾ ಲಾಭ ಪಡೆಯಲು ಹಿರೀಕರಿಗೆ ಕರೆ
ಕೊಪ್ಪಳ, ಅ.16: ಹಿರಿಯ ನಾಗರಿಕರಿಗೆ ಮಾಸಾಶನ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಸಂಧ್ಯಾ ಸುರಕ್ಷಾ' ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರ್ಕಾರ ಸರಳೀಕರಣಗೊಳಿಸಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯೆಲ್ ಅವರು ತಿಳಿಸಿದ್ದಾರೆ.
ಬಾಳಿನ
ಮುಸ್ಸಂಜೆಯಲ್ಲಿ
ಆರ್ಥಿಕವಾಗಿ
ಸಂಕಷ್ಟದಲ್ಲಿರುವ
ಹಿರಿಯ
ಜೀವಗಳಿಗೆ
ಭದ್ರತೆ
ಒದಗಿಸುವ
ಉದ್ದೇಶದಿಂದ
ರಾಜ್ಯ
ಸರ್ಕಾರ
ಸಂಧ್ಯಾ
ಸುರಕ್ಷಾ
ಯೋಜನೆಯನ್ನು
ಜಾರಿಗೆ
ತಂದಿದೆ.
ಈ
ಯೋಜನೆಯಲ್ಲಿ
65
ವರ್ಷ
ಮೇಲ್ಪಟ್ಟ
ಅರ್ಹ
ಹಿರಿಯ
ನಾಗರೀಕರು
ಪ್ರತಿ
ತಿಂಗಳಿಗೆ
ರೂ.
400
ಗಳ
ಮಾಸಾಶನ
ಪಡೆಯಬಹುದಾಗಿದೆ.
ಈ
ಯೋಜನೆಯಡಿ
ಮಾಸಾಶನ
ಪಡೆಯಲು
ಸಣ್ಣ
ರೈತರು,
ಅತಿ
ಸಣ್ಣ
ರೈತರು,
ಕೃಷಿ
ಕಾರ್ಮಿಕರು,
ನೇಕಾರರು,
ಮೀನುಗಾರರು,
ಅಸಂಘಟಿತ
ವಲಯದ
ಕಾರ್ಮಿಕರು
ನಿಗದಿತ
ಷರತ್ತುಗಳನ್ನು
ಪೂರೈಸಿದಲ್ಲಿ
ಮಾಸಾಶನ
ಮಂಜೂರು
ಮಾಡಿಸಿಕೊಳ್ಳಬಹುದಾಗಿದೆ.
ಈ
ಯೋಜನೆಗೆ
ಅರ್ಜಿ
ಸಲ್ಲಿಸಲು,
ಕುಟುಂಬದ
ವಾರ್ಷಿಕ
ಆದಾಯ
ಪ್ರತಿ
ವರ್ಷಕ್ಕೆ
ರೂ.
20,000
ಮೀರಿರಬಾರದು.
ಫಲಾನುಭವಿಯ
ಪತಿ
ಅಥವಾ
ಪತ್ನಿ
ಸಂಯೋಜಿತ
ಠೇವಣಿ
ಮೌಲ್ಯ
ರೂ.
10,000
ಕ್ಕಿಂತ
ಹೆಚ್ಚಿಗೆ
ಇರಬಾರದು,
ಯಾವುದೇ
ರೀತಿಯ
ಪಿಂಚಣಿಯನ್ನು
ಸಾರ್ವಜನಿಕ
/
ಖಾಸಗಿ
ಮೂಲದಿಂದ
ಪಡೆಯುತ್ತಿರಬಾರದು.
ಜನನ
ಪ್ರಮಾಣ
ಪತ್ರ,
ವೈದ್ಯಕೀಯ
ದೃಢೀಕರಣ
ಪತ್ರ
ಅಥವಾ
ಭಾರತ
ಚುನಾವಣಾ
ಆಯೋಗವು
ನೀಡಿರುವ
ಮತದಾರರ
ಗುರುತಿನ
ಚೀಟಿಯಲ್ಲಿನ
ಜನ್ಮ
ದಿನಾಂಕವು
ವಯಸ್ಸಿಗೆ
ಸಂಬಂಧಿಸಿದ
ದಾಖಲೆ
ಎಂದು
ಪರಿಗಣಿಸಲಾಗುವುದು.
ಸಂಧ್ಯಾ
ಸುರಕ್ಷಾ
ಯೋಜನೆಯಡಿ
ಅರ್ಜಿ
ಸಲ್ಲಿಸುವಾಗ
ಆದಾಯ
ದೃಢೀಕರಣ
ಪತ್ರ
ಮತ್ತು
ಉದ್ಯೋಗ
ಪ್ರಮಾಣ
ಪತ್ರವನ್ನು
ಸಲ್ಲಿಸುವುದು
ಅವಶ್ಯವಾಗಿರುತ್ತದೆ.
ಅರ್ಹ
ಹಿರಿಯ
ನಾಗರಿಕರು
ಈ
ಯೋಜನೆಯ
ಪ್ರಯೋಜನ
ಪಡೆದುಕೊಳ್ಳುವಂತೆ
ಪ್ರಾದೇಶಿಕ
ಆಯುಕ್ತ
ರಜನೀಶ್
ಗೋಯೆಲ್
ಅವರು
ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಹುಲಿಯನ್ನು
ದತ್ತು
ತೆಗೆದುಕೊಂಡ
ಯಡಿಯೂರಪ್ಪ
ಕರ್ನಾಟಕಕ್ಕೆ
ಕೇಂದ್ರದಿಂದ
ಹೆಚ್ಚುವರಿ
ವಿದ್ಯುತ್