ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲಿಯನ್ನು ದತ್ತು ತೆಗೆದುಕೊಂಡ ಯಡಿಯೂರಪ್ಪ

By Staff
|
Google Oneindia Kannada News

ಮೈಸೂರು, ಅ.15: ಶ್ರೀ ಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯಕ್ಕೆ ಸೇರಿದ ಬಂಗಾಳದ ಹುಲಿ (Royal Bengal Tiger) ಯೊಂದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದತ್ತ್ತು ತೆಗೆದುಕೊಂಡಿದ್ದಾರೆ.

ಪ್ರಾಣಿ ಸಂಗ್ರಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ವಿಜಯರಂಜನ್ ಸಿಂಗ್ ಈ ಬಗ್ಗೆ ವಿವರ ನೀಡಿದರು. ಮುಖ್ಯಮಂತ್ರಿಗಳು ಒಂದು ವರ್ಷದ ಕಾಲ ಹುಲಿಯನ್ನು ದತ್ತು ತೆಗೆದುಕೊಂಡಿದ್ದು, ಅದರ ಲಾಲನೆ ಪಾಲನೆಗಾಗಿ ರು.90,000 ದಾನವಾಗಿ ನೀಡಿದ್ದಾರೆಂದು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ವನ್ಯಜೀವಿಗಳ ಬಗೆಗಿನ ಮುಖ್ಯಮಂತ್ರಿಗಳ ಕಾಳಜಿ, ಕಳಕಳಿಯನ್ನು ಸಿಂಗ್ ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರಾಣಿಸಂಗ್ರಹಾಲಯಕ್ಕೆ ಸೇರಿದ ಹುಲಿಯೊಂದನ್ನು ದತ್ತು ತೆಗೆದುಕೊಳುತ್ತಿರುವುದು ಇದೇ ಮೊದಲು. ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆಯನ್ನು 2001-02ರಲ್ಲಿ ಜಾರಿಗೆ ತರಲಾಗಿತ್ತು ಎಂದು ಸಿಂಗ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ದಸರಾಕ್ಕೆ ಶೋಭೆ ತಂದ ಉಸ್ತುವಾರಿ ಸಚಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X