ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದತ್ತಪೀಠದಲ್ಲಿ ಮೂರ್ತಿ ಪೂಜೆಗೆ ಜಿಲ್ಲಾಡಳಿತ ಅವಕಾಶ

By Staff
|
Google Oneindia Kannada News

ಚಿಕ್ಕಮಗಳೂರು, ಅ. 11 : ವಿವಾದಿತ ದತ್ತ ಪೀಠದಲ್ಲಿ ಮೂರ್ತಿ ಪೂಜೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಅವಕಾಶ ನೀಡಿದೆ. ದತ್ತ ಪಾದುಕೆಯ ಬದಲಾಗಿ ಮೂರ್ತಿಯನ್ನು ಬೇರೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಬಹುದಾಗಿದೆ.

ಆದರೆ, ಜಿಲ್ಲಾಡಳಿತದ ಈ ಆದೇಶವನ್ನು ಕೋಮು ಸೌಹಾರ್ದ ವೇದಿಕೆ ತೀವ್ರವಾಗಿ ಖಂಡಿಸಿದೆ. ರಾಜ್ಯ ಕಾರ್ಯದರ್ಶಿ ಅಶೋಕ್ ಅವರು ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಬೇಕಾಗಿ ಎಚ್ಚರಿಕೆ ವೇದಿಕೆ ನೀಡಿದೆ.

ಬಾಬಾಬುಡನ್ ಗಿರಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ದತ್ತ ಪೀಠವಿರುವ ಗುಹೆಯ ಒಂದು ಭಾಗ ಕುಸಿದಿದೆ. ಈ ಕಾರಣ ದತ್ತ ಪೀಠ ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ದತ್ತ ಪಾದುಕೆಯನ್ನು ಬೇರೆಡೆ ಸ್ಥಳಾಂತರಿಸಲು ಸರ್ಕಾರ ಅವಕಾಶ ನೀಡದ್ದರಿಂದ ಮೂರ್ತಿ ಪೂಜೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದೇ ಕೋಮು ಸೌಹಾರ್ದ ವೇದಿಕೆಯ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತ ಗುಹೆಯ ದುರುಸ್ತಿಯನ್ನು ಕೈಗೊಳ್ಳಲಿದೆ. ದುರುಸ್ತಿಯ ನಂತರವೂ ಕನಿಷ್ಠ 4 ತಿಂಗಳು ಗುಹೆ ಪ್ರವೇಶಿಸುವುದು ಸಾಧ್ಯವಿಲ್ಲ. ದತ್ತಪೀಠದ ಪ್ರವೇಶ ದ್ವಾರದವರೆಗೆ ತಲುಪಿ ಪೂಜೆ ಸಲ್ಲಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ದತ್ತಮಾಲಾ ಅಭಿಯಾನಕ್ಕೆ ಮಹೂರ್ತ ಸಿದ್ಧ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X