ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರುಣಾಕರ ರೆಡ್ಡಿಯಿಂದ ತಿಮ್ಮಪ್ಪನಿಗೆ ಚಿನ್ನದ ಪಾದ
ತಿರುಮಲ, ಅ.10: ಕರ್ನಾಟಕ ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಅವರು ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಆಲಯಕ್ಕೆ ರು.50 ಲಕ್ಷ ಬೆಲೆ ಬಾಳುವ ಚಿನ್ನದ ಪಾದವನ್ನು ಕಾಣಿಕೆಯಾಗಿ ಗುರುವಾರ ರಾತ್ರಿ ಸಲ್ಲಿಸಿದರು.
ಪತ್ನಿ ಸಮೇತರಾಗಿ ತಿರುಪತಿಗೆ ಬಂದಿದ್ದ ಅವರು, ಚಿನ್ನ ಲೇಪಿತ 'ಶ್ರೀವಾರಿ ಪಾದಗಳನ್ನು' ಆಲಯಕ್ಕೆ ಸಲ್ಲಿಸಿದರು. ಸುಮಾರು 3 ಕೆ.ಜಿ.ತೂಕವುಳ್ಳ ಈ ಕಾಣಿಕೆಯನ್ನು ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ಡಿ.ಕೆ.ಆದಿಕೇಶವಲು ನಾಯ್ಡು ಅವರಿಗೆ ಕೊಟ್ಟರು. ವಾರ್ಷಿಕವಾಗಿ ನಡೆಯುವ ಒಂಬತ್ತು ದಿನಗಳ ಬ್ರಹ್ಮೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ಕರುಣಾಕರ ರೆಡ್ಡಿ ಆಗಮಿಸಿದ್ದರು.
ಸಚಿವ ಕರುಣಾಕರ ರೆಡ್ಡಿ ಸಹೋದರ ಹಾಗೂ ಪ್ರವಾಸೋದ್ಯಮ ಸಚಿವ ಜಿ.ಜನಾರ್ಧನ ರೆಡ್ಡಿ ಅಕ್ಟೋಬರ್ 1ರಂದು ತಿರುಮಲ ತಿರುಪತಿಯಲ್ಲಿ ಪ್ರಾರಂಭವಾದ ಬ್ರಹೋತ್ಸವ ಕಾರ್ಯಕ್ರಮಕ್ಕೆ 2 ಕೆ.ಜಿ ಚಿನ್ನವನ್ನು ಕಾಣಿಕೆಯಾಗಿ ಸಲ್ಲಿಸಿದ್ದರು.
(ಯುಎನ್ ಐ)
Comments
Story first published: Friday, October 10, 2008, 18:47 [IST]