ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಸರೆ ನಂತರ ನಗರದಲ್ಲಿ ನಾಟಕಗಳ ಹಬ್ಬ
ಬೆಂಗಳೂರು, ಅ.10: ದಸರೆ ಮುಗಿದ ನಂತರ ಬೆಂಗಳೂರು ದೀಪಾವಳಿಗೆ ಮುನ್ನ ಮತ್ತೊಂದು ಹಬ್ಬಕ್ಕೆ ತಯಾರಿಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಹಬ್ಬ ಅ.11 ರಿಂದ ಅ.26 ರವರೆಗೆ ನಡೆಯಲಿದೆ. ಪ್ರತಿ ನಾಟಕಕ್ಕೂ ಪ್ರವೇಶ ದರ 50 ರು ಹಾಗೂ 30 ರು ಮಾತ್ರ. ಒಟ್ಟು 25 ಲಕ್ಷ ರುಪಾಯಿ ಖರ್ಚು ಮಾಡಿ ನಾಟಕದ ರಸದೌತಣ ಉಣಬಡಿಸಲು ಸಂಸ್ಕೃತಿ ಇಲಾಖೆ ಸಿದ್ಧವಾಗಿದೆ ಎಂದು ರಂಗ ನಿರ್ದೇಶಕ ಕೆ.ವಿ. ನಾಗರಾಜ ಮೂರ್ತಿ ಹೇಳಿದರು.
ಈ ಬಾರಿಯ ರಂಗ ಹಬ್ಬದಲ್ಲಿ 17 ತಂಡಗಳು, ಸುಮಾರು 500 ಕಲಾವಿದರು, 100 ಕ್ಕೂ ಹೆಚ್ಚು ತಂತ್ರಜ್ಞರು ಭಾಗವಹಿಸುತ್ತಿದ್ದಾರೆ. 6 ಹೊಸ ನಾಟಕಗಳು, ರಂಗ ನೆನಪಿನ ಛಾಯಾ ಚಿತ್ರ ಪ್ರದರ್ಶನ ಮುಂತಾದ ವಿಶೇಷಗಳನ್ನು 'ನಾಟಕ ಬೆಂಗ್ಳೂರು' ಹಬ್ಬದಲ್ಲಿ ಕಾಣಬಹುದು.
ದಿನಾಂಕ/ ಸಮಯ | ನಾಟಕ, | ತಂಡ | ನಿರ್ದೇಶಕರು | ಸಂಪರ್ಕ ವಿಳಾಸ |
11/10/08, ಸಂಜೆ 7 | ಸಾವಿರದವಳು | ಅದಮ್ಯ | ಮಾಲತೇಶ ಬಡಿಗೇರ | 998801 42532 |
12/10/08, ಬೆಳಿಗ್ಗೆ 11 | ರಾಮ ರಾವಣರಾಟ | ಅಭಿನಯ ತರಂಗ | ಜೋಸೆಫ್ | 98458 25214 |
12/10/08, ಸಂಜೆ 7 | ಹೇ ರಾಮ್ | ಸ್ನೇಹ ಸಮೂಹ | ಸುನೀಲ್ ಕುಮಾರ್ ಸಿಂಗ್ | 94484 61718 |
13/10/08, ಸಂಜೆ 7 | ಗಿರಿಜಾ ಕಲ್ಯಾಣ | ಸ್ಪಂದನ | ಬಿ.ಜಯಶ್ರೀ | 94481 19345 |
14/10/08, ಸಂಜೆ 7 | ಬಡೇಸಾಬು ಪುರಾಣ | ರೂಪಾಂತರ | ಕೆಎಸ್ ಡಿಎಲ್ ಚಂದ್ರು | 94487 09747 |
15/10/08, ಸಂಜೆ 7 | ಸ್ವಾತಂತ್ರ್ಯದ ಓಟ | ಸಮುದಾಯ | ಶಶಿಧರ್ ಭಾರಿಘಾಟ್ | 99012 99228 |
16/10/08, ಸಂಜೆ 7 | ಜೇನುಹುಡುಗಿ | ರಂಗಚೇತನ | ತೊ. ನಂಜುಂಡಸ್ವಾಮಿ | 94486 84055 |
17/10/08, ಸಂಜೆ 7 | ಮಿಸ್. ಸದಾರಮೆ | ಸಮಷ್ಟಿ | ಮಂಜುನಾಥ ಎಲ್ ಬಡಿಗೇರ | 98451 63380 |
19/10/08, ಸಂಜೆ 7 | ಜಂಗಮದ ಬದುಕು | ಪ್ರಯೋಗ ರಂಗ | ಕೆ.ವಿ. ನಾಗರಾಜಮೂರ್ತಿ | 94480 82927 |
20/10/08, ಸಂಜೆ 7 | ಸದ್ದು ವಿಚಾರಣೆ ನಡೀತಿದೆ | ಅಂತರಂಗ | ಋತ್ವಿಕ್ ಸಿಂಹ | 98809 14509 |
21/10/08, ಸಂಜೆ 7 | ಅರರೇ ಕುಂಯಿರಾಮ | ಅನೇಕ | ಸುರೇಶ್ ಅನಗಳ್ಳಿ | 94480 50950 |
22/10/08, ಸಂಜೆ 7 | ಜೀವನ ನಾಟಕ | ಶಿವರಂಗ | ಮೈಕೊ ಶಿವಣ್ಣ | 98451 23399 |
23/10/08, ಸಂಜೆ 7 | ಸಾಹೇಬರು ಬರುತ್ತಾರೆ | ಬೆನಕ ಶೈಲೂಷರು | ಆರ್. ನಾಗೇಶ್ | 93437 81628 |
24/10/08, ಸಂಜೆ 7 | ತುದಿಯಂಬೊ ತುದಿಯಲ್ಲ | ರಂಗ ನಿರಂತರ | ಕೃಷ್ಣಮೂರ್ತಿ ಕವತ್ತಾರ | 98446 27029 |
25/10/08, ಸಂಜೆ 7 | ಮಾಯಾವಿ ಸರೋವರ | ಕಲಾಗಂಗೋತ್ರಿ | ಡಾ. ಬಿ.ವಿ. ರಾಜಾರಾಂ | 97780 69667 |
26/10/08, ಬೆಳಿಗ್ಗೆ7 | ಮಾಯಾ ಡಂಗುರ | ನಟರಂಗ | ನಂದಗೋಪಾಲ್ | 98441 12241 |
26/10/08, ಸಂಜೆ 7 | ಕಳವು | ರಂಗಸಂಪದ | ಪ್ರಮೋದ್ ಶಿಗ್ಗಾಂವ್ | 98452 14370 |
Comments
Story first published: Friday, October 10, 2008, 18:03 [IST]