ನಗರದಲ್ಲಿ ಶಾಲಾ ಮಕ್ಕಳಿಗೆ ವನ್ಯಜೀವಿ ಚಿತ್ರ ಸ್ಪರ್ಧೆ
ಬೆಂಗಳೂರು,ಸೆ.26: 2008 ನೇ ಅಕ್ಟೋಬರ್ 1 ರಿಂದ 7 ರವರೆಗೆ 54 ನೇ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಸಂಬಂಧವಾಗಿ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್2 ರಂದು ವನ್ಯಪ್ರಾಣಿಗಳ ಮತ್ತು ಪ್ರಕೃತಿ ಸಂರಕ್ಷಣೆ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಚಿತ್ರ ಬರೆದು ಬಣ್ಣ ಹಚ್ಚುವುದು, ಪ್ರಬಂಧ ಸ್ಪರ್ಧೆಯನ್ನು ನಗರದ ಮಲ್ಲೇಶ್ವರಂನ 18 ನೇ ಕ್ರಾಸ್ನಲ್ಲಿರುವ ಅರಣ್ಯ ಭವನದಲ್ಲಿ ನಡೆಸಲಾಗುವುದು. ಚಿತ್ರ ಬರೆದು ಬಣ್ಣ ಹಚ್ಚುವ ಸ್ಪರ್ಧೆಯನ್ನು ಬೆಳಿಗ್ಗೆ 10.00 ರಿಂದ 11.30 ಗಂಟೆಯವರೆಗೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಮಧ್ಯಾಹ್ನ 12.30 ರಿಂದ 1.30 ಗಂಟೆಯವರೆಗೆ ನಡೆಸಲಾಗುವುದು.
ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿ/ನಿಯರು ಸಂಬಂಧಪಟ್ಟ ಶಾಲಾ -ಕಾಲೇಜು ಮುಖ್ಯಸ್ಥರಿಂದ ಗುರುತಿನ ಚೀಟಿಯನ್ನು ಪಡೆದು ಸ್ಪರ್ಧೆಯ ದಿನದಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಜರುಪಡಿಸಿ, ಭಾಗವಹಿಸಬಹುದಾಗಿದೆ. ಶಾಲಾ ಕಾಲೇಜುಗಳ ಮುಖ್ಯಸ್ಥರು ಈ ಸ್ಪರ್ಧೆಗಳಿಗೆ ಸ್ಪರ್ಧಿಗಳನ್ನು ಕಳುಹಿಸಿಕೊಡುವಂತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೋರಿದ್ದಾರೆ.
ಹೆಚ್ಚಿನ
ಮಾಹಿತಿಗಾಗಿ
ಉಪ
ಅರಣ್ಯ
ಸಂರಕ್ಷಣಾಧಿಕಾರಿಗಳವರ
ಕಚೇರಿ,
ಬನ್ನೇರುಘಟ್ಟ,
ರಾಷ್ಟೀಯ
ಉದ್ಯಾನವನ,
ಬೆಂಗಳೂರು
-83
ಇವರ
ದೂರವಾಣಿ
ಸಂಖ್ಯೆ
080-28429366,
28429950
ಅನ್ನು
ಸಂಪರ್ಕಿಸಬಹುದು.
(ದಟ್ಸ್
ಕನ್ನಡ
ವಾರ್ತೆ)