ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯಿದೆ ಜಾರಿ
ಬೆಂಗಳೂರು, ಸೆ. 23 : ಚರ್ಚ್ ಮೇಲಿನ ದಾಳಿ ಮಾಡುವ ದುಷ್ಕರ್ಮಿಗಳನ್ನು ಗೂಂಡಾ ಕಾಯಿದೆಯಡಿ ಬಂಧಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ವಿವಿಧೆಡೆ ನಡೆದ ದಾಳಿ ಹಿನ್ನೆಲೆಯಲ್ಲಿ ಸೋಮವಾರ ತುರ್ತು ಸಚಿವ ಸಂಪುಟ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರಿಗೆ ವಿವರಿಸಿದರು.
ರಾಜ್ಯದಲ್ಲಿರುವ ಕ್ರೈಸ್ತರಿಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಂತಿ ಭಂಗ ತರುವ ಕೆಲಸಕ್ಕೆ ಯಾರೇ ಕೈಹಾಕಿದರೂ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಶೀಘ್ರದಲ್ಲಿ ಅಂತವರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತವಾಗಿ ಉತ್ತರ ನೀಡುವೆ ಎಂದು ಪ್ರತಿ ಪಕ್ಷದ ನಾಯಕರಿಗೆ ತೀಕ್ಷ್ಣವಾಗಿ ಹರಿಹಾಯ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ನಿರಂತರವಾಗಿದೆ. ಇದಕ್ಕೆ ನಾವು ಬಗ್ಗುವುದಿಲ್ಲ ಎಂದ ಯಡಿಯೂರಪ್ಪ,ಅನಗತ್ಯವಾಗಿ ಭಾವನೆಗಳನ್ನು ಕೆರಳಿಸುವಂತಹ ಮಾತುಗಳನ್ನಾಡುವುದು ಸರಿಯಲ್ಲ. ಪ್ರತಿಪಕ್ಷದ ನಾಯಕರು ಇದನ್ನು ಅರಿತುಕೊಳ್ಳಬೇಕು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ರಾಜರಾಜೇಶ್ವರಿ ನಗರದ ಚರ್ಚ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿ, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಸುನೀಲ್ ಜಾರ್ಜ್ ಎಂಬಾತನು ಸೇರಿದ್ದು, ಅಲ್ಲಿ ವಶಪಡಿಸಿಕೊಂಡಿರುವ ಧ್ವನಿಸುರುಳಿ ಹಾಗೂ ಸಾಹಿತ್ಯದಲ್ಲಿ ಮತಾಂತರ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಅವರು ವಿವರಿಸಿದರು. ಮರಿಯಣ್ಣನಪಾಳ್ಯ ಚರ್ಚ್ ಮೇಲೆ ದಾಳಿ ನಡೆದಿಲ್ಲ. ಅದು ಕಳ್ಳತನ ಪ್ರಕರಣವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಾಂಗ್ಲಿಯಾನ
ಮೇಲೆ
ಸಿಎಂ
ಕೆಂಗಣ್ಣು
'ಈ
ಮುಖ್ಯಮಂತ್ರಿಯಿಂದ
ರಾಜ್ಯದಲ್ಲಿರುವ
ಕ್ರಿಶ್ಚಿಯನ್
ಬದುಕು
ಕಷ್ಟಕರವಾಗಿದೆ'
ಎಂದು
ಹೇಳಿಕೆ
ನೀಡಿರುವ
ಮಾಜಿ
ಸಂಸದ
ಸಾಂಗ್ಲಿಯಾನ
ಅವರ
ವಿರುದ್ಧ
ತೀವ್ರ
ಆಕ್ರೋಶ
ವ್ಯಕ್ತಪಡಿಸಿದ
ಯಡಿಯೂರಪ್ಪ,
ಸಾಂಗ್ಲಿಯಾನ
ಪ್ರಚೋದನೆ
ಕಾರ್ಯದಲ್ಲಿ
ತೊಡಗಿದ್ದಾರೆ.
ಈ
ಹಿನ್ನೆಲೆಯಲ್ಲಿ
ಅವರ
ಚಲನವಲನಗಳ
ಬಗ್ಗೆ
ನಿಗಾ
ಇರಿಸುವಂತೆ
ಪೊಲೀಸ್
ಅಧಿಕಾರಿಗಳಿಗೆ
ಸೂಚಿಸಲಾಗಿದೆ
ಎಂದು
ಹೇಳಿದರು.
(ದಟ್ಸ್ ಕನ್ನಡ ವಾರ್ತೆ)