ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿ: ಉಗ್ರರೊಂದಿಗೆ ಎನ್ ಕೌಂಟರ್

By Staff
|
Google Oneindia Kannada News

ನವದೆಹಲಿ, ಸೆ. 19 : ಕಳೆದ ಕೆಲ ದಿನಗಳ ಹಿಂದೆ ಬಾಂಬ್ ಸ್ಫೋಟದಿಂದ ತತ್ತರಿಸಿದ್ದ ರಾಜಧಾನಿಯಲ್ಲಿ ಇಂದು ಮತ್ತೆ ನಗರದ ದಕ್ಷಿಣ ಭಾಗದಲ್ಲಿರುವ ಜಾಮಿಯಾ ನಗರದಲ್ಲಿ ಉಗ್ರ ತಂಡ ಪ್ರತ್ಯಕ್ಷವಾಗಿದೆ. ನಗರದ ಜಾಮಿಯಾ ನಗರದ ಬಟ್ಲಾ ಪ್ರದೇಶದ ಖಲೀವುಲ್ಲಾ ಮಸೀದಿಯ ಪಕ್ಕದಲ್ಲಿರುವ ಮನೆಯೊಂದರಲ್ಲಿ ಅವಿತುಕೊಂಡಿದ್ದ ಉಗ್ರರೊಂದಿಗೆ ಪೊಲೀಸರು ಗುಂಡಿನ ಕಾಳಗ ಮುಂದುವರೆದಿದೆ.

ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಉಗ್ರರು ಮೃತಪಟ್ಟಿದ್ದಾರೆ. ನಾಲ್ವರು ಉಗ್ರರು ಮಸೀದಿಯ ಪಕ್ಕದ ಮನೆಯಲ್ಲಿ ಅವಿತುಕೊಂಡಿದ್ದು, ಗುಂಡಿನ ಕಾಳಗ ಇನ್ನೂ ಮುಂದುವರೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಹುಜಿ ಸಂಘಟನೆಗೆ ಸೇರಿದ ಉಗ್ರರು ಎನ್ನಲಾಗಿದೆ.

ದೆಹಲಿಯ ವಿಶೇಷ ಪೊಲೀಸ ತಂಡ ಈ ಕಾರ್ಯಚರಣೆ ಮುಂದುವೆರೆಸಿದ್ದು, ಉಗ್ರರು ಅವಿತು ಕೊಂಡಿರುವ ಮಸೀದಿಯ ಸುತ್ತ ಮುತ್ತ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕಳೆದ ಕೆಲ ದಿನಗಳಿಂದ ಕಾಶ್ಮೀರದಲ್ಲಿ ನಡೆದ ಅಪಹರಣ ಪ್ರಕರಣ ಹಾಗೂ ಗುಂಡಿನ ಕಾಳಗ ನಡೆದಿತ್ತು. ಅದೇ ಮಾದರಿಯಲ್ಲಿ ಇಂದು ಕೂಡಾ ಮಸೀದಿಯಲ್ಲಿ ಅಡಗಿ ಕುಳಿತು ಇನ್ನೊಂದು ದಾಳಿ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.

ಅಹಮದಾಬಾದ್ ಸ್ಫೋಟದ ರೂವಾರಿ ಅಬು ಬಶೀರ್ ಹಾಗೂ ದಿಲ್ಲಿ ಸ್ಫೋಟದ ಪ್ರಮುಖ ತಾಖೀರ್ ವಿಚಾರಣೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ನಡೆದಿರುವುದು ಮಹತ್ವದ ಸಂಗತಿಯಾಗಿದೆ. ಅಲ್ಲದೇ ಅಬು ಬಶೀರ್ ವಿಚಾರಣೆ ವೇಳೆಯಲ್ಲಿ ನೀಡಿದ ಮಹತ್ವದ ಮಾಹಿತಿಯ ಆಧಾರದ ಮೇಲೆ ಇಂದು ಪೊಲೀಸರು ದಾಳಿ ನಡೆಸಿದ್ದಾರೆ.

ಜಾಮಿಯಾ ನಗರದಲ್ಲಿ ಮುಸ್ಲಿಂ ಜನಾಂಗದವರೆ ಹೆಚ್ಚಾಗಿ ವಾಸಿಸುತ್ತಿದ್ದು, ಈ ಪ್ರದೇಶದಲ್ಲಿ ಅಬು ಬಶೀರ್ ಹಾಗೂ ತಾಖೀರ್ ಶಂಕಿತ ಉಗ್ರರು ವಾಸವಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಎನ್ ಕೌಂಟರ್ ನಡೆಯುತ್ತಿರುವ ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಪಡೆ ಆಗಮಿಸಿದ್ದು, ಉಗ್ರರನ್ನು ಸೆದೆಬಡಿಯುವಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ. ಎನ್ ಕೌಂಟರ್ ಮುಂದುವರೆದಿದೆ.

(ದಟ್ಸ್ ಕನ್ನಡ ವಾರ್ತೆ)
ದಿಲ್ಲಿ ಸ್ಫೋಟ : 10 ಶಂಕಿತ ವ್ಯಕ್ತಿಗಳ ವಿಚಾರಣೆ
ಸಿಮಿ ನಿಷೇಧ ಮುಂದುವರಿಕೆ : ಸುಪ್ರಿಂಕೋರ್ಟ್
ಸೂರತ್ ಸ್ಫೋಟದ ಸೂತ್ರದಾರ ಅಬು ಬಶೀರ್
ಸರಣಿ ಸ್ಫೋಟ : 14 ದಿನ ಪೊಲೀಸ್ ವಶಕ್ಕೆ ಸಿಮಿ ಉಗ್ರರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X