ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌರಿಬಿದನೂರು ಚರ್ಚ್ ಮೇಲೆ ದಾಳಿ
ಗೌರಿಬಿದನೂರು, ಸೆ. 19 : ಮಂಗಳೂರು ಚರ್ಚ್ ದಾಳಿ ಪ್ರಕರಣ ರಾಜ್ಯ ಇತರೆಡೆಗೂ ಹಬ್ಬಿದ್ದು, ಇಂದು ತಾಲ್ಲೂಕಿನ ಮಂಚೆನಹಳ್ಳಿಯ ಹೊರವಲಯದಲ್ಲಿರುವ ಹಾನರಿ ಚರ್ಚ್ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಪಿಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಚರ್ಚ್ ಮೇಲಿನ ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಗೌರಿಬಿದನೂರಿನ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚರ್ಚ್ ನ ಕಿಟಕಿ, ಶಿಲುಬೆ ಹಾಗೂ ಇತರೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ದಾಳಿಯಲ್ಲಿ ಯಾವ ಸಂಘಟನೆಗಳ ಕೈವಾಡವಿಲ್ಲ. ಇದು ಕಿಡಿಗೇಡಿಗಳ ಕೆಲಸವಾಗಿದೆ ಎಂದು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಚರ್ಚ್
ಮೇಲಿನ
ದಾಳಿ
ನಿಲ್ಲಿಸದಿದ್ದರೆ
ಶಿಸ್ತು
ಕ್ರಮ
ಭಜರಂಗದಳ
ಮುಖಂಡನ
ಬಂಧನಕ್ಕೆ
ಆಗ್ರಹ
Comments
Story first published: Friday, September 19, 2008, 16:43 [IST]