ಚರ್ಚ್ ಮೇಲಿನ ದಾಳಿ ನಿಲ್ಲಿಸದಿದ್ದರೆ ಶಿಸ್ತು ಕ್ರಮ
ನವದೆಹಲಿ, ಸೆ. 19 : ಚರ್ಚ್ ಗಳ ಮೇಲಿನ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಆಂತರಿಕ ಗಲಭೆ ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಸಂವಿಧಾನದ 355 ಪರಿಚ್ಛೇದದಡಿಯಲ್ಲಿ ಕರ್ನಾಟಕ ಮತ್ತು ಒರಿಸ್ಸಾ ರಾಜ್ಯಗಳಿಗೆ ಎಚ್ಚರಿಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಮತ್ತು ಕೋಲಾರಗಳಲ್ಲಿನ ಚರ್ಚ್ ಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಕಾರ್ಯದರ್ಶಿಗಳು ಈಗಾಗಲೇ ರಾಜ್ಯಪಾಲರು ಮತ್ತು ಮುಖ್ಯ ಕಾರ್ಯದರ್ಶಿಗಳು ಜತೆ ಮಾತುಕತೆ ನಡೆಸಿದ್ದಾರೆ. ಇದರ ನಂತರವೂ ದಾಳಿಯಲ್ಲಿ ಪಾಲ್ಗೊಂಡಿರುವ ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿರುವುದು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿದೆ.
ಏನಿದು 355 ನೇ ವಿಧಿ
ತುರ್ತು
ಸಂದರ್ಭದಲ್ಲಿ
ಬಳಸಬಹುದಾದ
ಮೂರು
ಪ್ರಮುಖ
ಸಾಂವಿಧಾನಿಕ
ವಿಧಿಗಳು
ಕೇಂದ್ರ
ಸರ್ಕಾರದ
ಬತ್ತಳಿಕೆಯಲ್ಲಿ
ಇರುತ್ತವೆ.
*
352
ನೇ
ವಿಧಿ
ಪ್ರಕಾರ
ಕೇಂದ್ರ
ಸರ್ಕಾರ
ತುರ್ತು
ಪರಿಸ್ಥಿತಿಯನ್ನು
ಹೇರಬಹುದು.
ಈ
ಅಸ್ತ್ರವನ್ನು
ಇಂದಿರಾಗಾಂಧಿ
ಬಳಸಿದ್ದರು.
*
356
ನೇ
ವಿಧಿ
ಪ್ರಕಾರ
ಕೇಂದ್ರ
ಸರ್ಕಾರ
ರಾಜ್ಯ
ಸರ್ಕಾರವನ್ನು
ವಜಾ
ಮಾಡಿ
ರಾಷ್ಟ್ರಪತಿ
ಆಡಳಿತ
ಹೇರಬಹುದು.
100ಕ್ಕೂ
ಹೆಚ್ಚು
ಸಲ
ಈ
ವಿಧಿ
ಜಾರಿಯಾಗಿದೆ.
*
355
ನೇ
ವಿಧಿಯೇ
ಮೂರನೇ
ಅಸ್ತ್ರ.
ಇದು
ಇನ್ನೆರಡು
ವಿಧಿಗಳಷ್ಟು
ಕಠಿಣವಲ್ಲ.
355
ನೇ
ವಿಧಿಯ
ಪ್ರಕಾರ
ಭಾರತದ
ಯಾವುದೇ
ರಾಜ್ಯವನ್ನು
ಬಾಹ್ಯ
ದಾಳಿ
ಅಥವಾ
ಆಂತರಿಕ
ಕಲಹದಿಂದ
ರಕ್ಷಿಸುವುದು
ಕೇಂದ್ರ
ಸರ್ಕಾರದ
ಜವಾಬ್ದಾರಿ.
ಅಂತಹ
ಸಂದರ್ಭದಲ್ಲಿ
ಕೇಂದ್ರ
ಸರ್ಕಾರ
ಸ್ವಯಂ
ಪ್ರೇರಿತವಾಗಿ
ರಾಜ್ಯದ
ಆಡಳಿತವನ್ನು
ತನ್ನ
ವಶಕ್ಕೆ
ತೆಗೆದುಕೊಳ್ಳಬಹುದು.
ಈ
ಸಾಂವಿಧಾನಿಕ
ಅಸ್ತ್ರವನ್ನು
ಯಾವುದೇ
ಕೇಂದ್ರ
ಸರ್ಕಾರ
ಈ
ವರೆಗೊ
ಬಳಸಲ್ಲ.
(ದಟ್ಸ್
ಕನ್ನಡ
ವಾರ್ತೆ)
ಭಜರಂಗದಳ
ಮುಖಂಡನ
ಬಂಧನಕ್ಕೆ
ಆಗ್ರಹ
ಮಂಗಳೂರು
ಗಲಭೆ
:
ಸಿಓಡಿ
ತನಿಖೆಗೆ
ಸಂಪುಟ
ಅಸ್ತು
ಮಂಗಳೂರು
ಗಲಭೆ
ರಾಕ್ಷಸೀ
ಕೃತ್ಯ
:
ಮೊಯ್ಲಿ