ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮಯಾಜಿಗಳಿಗೆ ಚಿದಂಬರ ಪ್ರಶಸ್ತಿ ಪ್ರದಾನ

By Staff
|
Google Oneindia Kannada News

ಗುಬ್ಬಿ, ಸೆ.19: ಖ್ಯಾತ ಜ್ಯೋತಿಷಿ ದೈವಜ್ಞ ಸೋಮಯಾಜಿ ಅವರಿಗೆ 2008-09ನೇ ಸಾಲಿನ 'ಚಿದಂಬರ ಪ್ರಶಸ್ತಿ' ಯನ್ನು ಇಲ್ಲಿನ ಶ್ರೀ ಚಿದಂಬರಾಶ್ರಮದಲ್ಲಿ ನೀಡಿ, ಗೌರವಿಸಲಾಗುವುದು ಎಂದು ಆಶ್ರಮದ ಅಧ್ಯಕ್ಷ ಶಿವಚಿದಂಬರ ಶರ್ಮ ಅವರು ಹೇಳಿದ್ದಾರೆ.

ಶ್ರೀ ಚಿದಂಬರ ಸ್ವಾಮಿ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು ಸೆ. 21 ರಂದು ಸೋಮಯಾಜಿಗಳಿಗೆ ಪ್ರದಾನ ಮಾಡಲಗುವುದು. ಈ ಸಮಾರಂಭಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮುಜರಾಯಿ ಖಾತೆ ಸಚಿವ ಕೃಷ್ಣಯ್ಯ ಶೆಟ್ಟಿ, ರಾಜ್ಯಸಭೆ ಸದಸ್ಯ ನ್ಯಾ. ರಾಮಾ ಜೋಯಿಸ್, ಸಂಸದ ಅನಂತ್ ಕುಮಾರ್, ಮಲ್ಲಿಕಾರ್ಜುನಯ್ಯ, ಶಾಸಕ ಶ್ರೀನಿವಾಸ್ ಆಗಮಿಸಲಿದ್ದಾರೆ.

ಜೊತೆಗೆ ಕೊಳದಮಠದ ಡಾ.ಶಾಂತವೀರ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಶಿ, ವಿಜಯಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್, ವಿದ್ವಾಂಸ ಕೆ.ಜೆ . ಸುಬ್ರಾಯ ಶರ್ಮಾ, ನಟ ದೊಡ್ಡಣ್ಣ , ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ ಎಂದು ಚಿದಂಬರಾಶ್ರಮ ಟ್ರಸ್ಟ್ ನ ವಿಶ್ವಸ್ಥ ಡಾ.ಎಸ್.ಎಸ್. ಸಚ್ಚಿದಾನಂದ ತಿಳಿಸಿದರು.

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X