ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರ ಕರ್ನಾಟಕದಲ್ಲಿ ಲಘು ಭೂಕಂಪನ
ಬೆಳಗಾವಿ, ಸೆ. 17 : ಇಂದು ನಸುಕಿನ ಜಾವ ಸುಮಾರು 3.30 ಗಂಟೆಗೆ ರಾಜ್ಯದ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಕೆಲ ಭಾಗಗಳಲ್ಲಿ ಲಘು ಭೂಕಂಪವಾಗಿರುವ ಬಗ್ಗೆ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಅಧಿಕೃತ ಎಷ್ಟು ಪ್ರಮಾಣದಲ್ಲಿ ಭೂಕಂಪನವಾಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಮೂರರಿಂದ ಐದು ಸೆಕೆಂಡ್ ವರೆಗೆ ಭೂಮಿ ಕಂಪನವಾಗಿದೆ ಎನ್ನಲಾಗಿದೆ.
ಬಿಜಾಪುರ ಜಿಲ್ಲೆಯ ಜಮಖಂಡಿ ಮತ್ತಿತರ ಕಡೆಯ ಜನರಿಗೆ ಕಂಪನದ ಅನುಭವ ಸ್ಪಷ್ಟವಾಗಿ ಆಗಿದ್ದು, ಭೂಮಿ ಕಂಪಿಸುತ್ತಿದ್ದಂತೆಯೇ ಜನ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿರುವ ಪಾತ್ರೆ. ಪಗಡೆಗಳು ಕೆಳಕ್ಕೆ ಬಿದ್ದಿವೆ. ಈ ವಿಸ್ಮಯದಿಂದ ಜನರಲ್ಲಿ ಕೆಲ ಹೊತ್ತು ಆತಂಕ ಮನೆಮಾಡಿತ್ತು. ಆದರೆ ಭೂಕಂಪನದಿಂದ ಯಾವುದೇ ಹಾನಿ ಉಂಟಾಗಿಲ್ಲ. ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಬೆಂಗಳೂರಿನ ಕೆಲ ಭಾಗಗಳಲ್ಲಿ ಭೂಪಂಕನವಾಗಿರುವದನ್ನು ನೆನಪಿಸಿಕೊಳ್ಳಬಹುದು.
(ದಟ್ಸ್ ಕನ್ನಡ ವಾರ್ತೆ)
ಬೆಂಗಳೂರಿನಲ್ಲಿ
ಲಘು
ಭೂಕಂಪ
ಉತ್ತರ
ಕರ್ನಾಟಕವನ್ನು
ನಡುಗಿಸಿದ
ಹುಸಿ
ಭೂಕಂಪ
Comments
Story first published: Wednesday, September 17, 2008, 10:43 [IST]