ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆ.14 ರಂದು ಪ್ರಕೃತಿ ಸೇವಾ ಟ್ರಸ್ಟ್ ಉದ್ಘಾಟನೆ
ಬೆಂಗಳೂರು, ಸೆ. 12 : ಪ್ರಕೃತಿ ಸಮಾಜ ಸೇವಾ ಟ್ರಸ್ಟ್ ನ ಉದ್ಘಾಟನೆಯ ಅಂಗವಾಗಿ ಸೆ. 14 ರಂದು ಬೆಳಗ್ಗೆ 9 ಗಂಟೆಗೆ ನಗರದ ಆರ್ ಪಿಸಿ ಲೇಔಟ್ ಬಳಿಯಲ್ಲಿರುವ ಹಂಪಿನಗರದ ಬಸ್ ನಿಲ್ದಾಣದ ಹತ್ತಿರ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ವ್ಯಾಸರಾಜ ಮಠದ ಶ್ರೀಮದ್ ವಿದ್ಯಾಮನೋಹರ ತೀರ್ಥ ಸ್ವಾಮಿಗಳು ವಹಿಸುವರು. ವಿಜಯನಗರದ ಶಾಸಕ ಎಂ.ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗಶೆಟ್ಟಿ, ಮಾಜಿ ನಗರಸಭಾ ಸದಸ್ಯ ಜಿ.ಎಚ್.ರಾಘವೇಂದ್ರ, ತೋಟಗಾರಿಕೆ ಇಲಾಖೆ ನಿರ್ದೇಶಕ ವಸಂತಕುಮಾರ್, ಬೆಂಗಳೂರು ತಹಸೀಲ್ದಾರ ಬೀರಲಿಂಗೇಗೌಡ, ಜಿ.ಎನ್,ನರಸಿಂಹಮೂರ್ತಿ ಹಾಗೂ ಡಾ.ಚಿದಾನಂದಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, September 12, 2008, 18:09 [IST]