ತೆಲಗಿಗೆ ಮನೆ ಊಟ ನೀಡಲು ಹೈಕೋರ್ಟ್ಗೆ ಅರ್ಜಿ
ಬೆಂಗಳೂರು, ಆ.26: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಕಕ್ಷಿದಾರ ಕರೀಂಲಾಲಾ ತೆಲಗಿಗೆ ಮನೆ ಊಟ ಸೇವಿಸಲು ಅವಕಾಶ ನೀಡಬೇಕೆಂದು ಅವರ ಪರ ವಕೀಲರು ಹೈಕೋರ್ಟನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂಲಾಲಾ ತೆಲಗಿಗೆ ಎಚ್ಐವಿ ಸೋಂಕು ಇದೆ. ಜೊತೆಗೆ ತೀವ್ರವಾದ ಮಧುಮೋಹ,ರಕ್ತದೊತ್ತಡ ಅವರನ್ನು ಬಾಧಿಸುತ್ತಿದೆ. ಜೈಲಿನಲ್ಲಿ ನೀಡುವ ಆಹಾರದಿಂದ ಅವರ ಆರೋಗ್ಯ ಮತ್ತ್ತಷ್ಟು ಹದಗೆಡುವ ಸಾಧ್ಯತೆಗಳಿವೆ. ಆದಕಾರಣ ತನ್ನ ಕಕ್ಷಿದಾರನಿಗೆ ಮನೆಯಿಂದ ತರಿಸಿಕೊಂಡ ಆಹಾರ ಸೇವಿಸಲು ಅವಕಾಶ ನೀಡಬೇಕೆಂದು ಹೈಕೋರ್ಟ್ನಲ್ಲಿ ತೆಲಗಿ ಪರ ವಕೀಲರು ಕೋರಿದ್ದರು.
ಜೈಲಿನಲ್ಲಿ ಮನೆಯೂಟ ಮತ್ತು ದೂರವಾಣಿ ಸೌಲಭ್ಯಕ್ಕೆ ಅನುಮತಿ ಕೋರಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ 35ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ದೂರವಾಣಿ ಬಳಕೆಗೆ ಮಾತ್ರ ಅನುಮತಿ ನೀಡಿತು. ಕೆಲವು ಪ್ರಕರಣಗಳಲ್ಲಿ ತೆಲಗಿ ಅಪರಾಧಿ ಎಂಬುದು ಸಾಬೀತಾಗಿದೆ. ಆದಕಾರಣ ಅವರಿಗೆ ಮನೆಯೂಟ ಸೇವನೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಸೆಷನ್ಸ್ ನ್ಯಾಯಾಲಯದ ಆದೇಶವನ್ನ್ನು ಪ್ರಶ್ನಿಸಿ ಈಗ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
(ದಟ್ಸ್ಕನ್ನಡ ವಾರ್ತೆ)