ಬೆಂಗಳೂರು ಸ್ಫೋಟ; ಇಬ್ಬರು ಶಂಕಿತರ ಬಂಧನ
ಕೋಲ್ಕತ್ತಾ,
ಆ.
03
:
ದೆಹಲಿ
ಮತ್ತು
ಪಶ್ಚಿಮ
ಬಂಗಾಳದ
ಪೊಲೀಸರು
ನಡೆಸಿದ
ಮಹತ್ವದ
ಕಾರ್ಯಚರಣೆಯೊಂದರಲ್ಲಿ
ಕಳೆದ
ಕೆಲ
ದಿನಗಳ
ಹಿಂದೆ
ಬೆಂಗಳೂರು
ಮತ್ತು
ಅಹಮದಾಬಾದ್
ನಗರಗಳಲ್ಲಿ
ನಡೆದ
ಬಾಂಬ್
ಸ್ಫೋಟ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಇಬ್ಬರು
ಬಾಂಗ್ಲಾ
ಮೂಲದ
ಉಗ್ರರನ್ನು
ಸಿಲಿಗುರಿ
ಜಿಲ್ಲೆಯ
ಭಕ್ತಿನಗರ
ಎಂಬಲ್ಲಿ
ಬಂಧಿಸಿದ್ದಾರೆ.
ಬಾಂಗ್ಲಾದೇಶದ
ಕುಲ್ನಾ
ಪ್ರದೇಶದ
ಮೊಹ್ಮದ್
ಯಾಸೀನ್
ಹಾಗೂ
ಮೊಹ್ಮದ್
ಮೆಹರುದ್ದೀನ್
ಅಲಿಯಾಸ್
ಮುನ್ನಾ
ಬಂಧನಕ್ಕೊಳಗಾಗಿರುವ
ಶಂಕಿತ
ಉಗ್ರರು
ಎಂದು
ಪೊಲೀಸರು
ತಿಳಿಸಿದ್ದಾರೆ.
ಬಂಧಿತ
ಆರೋಪಿಗಳನ್ನು
ಸಿಲಿಗುರಿ
ಜಿಲ್ಲೆಯ
ಜಿಲ್ಲಾ
ನ್ಯಾಯಲಯದ
ಸುಪರ್ದಿಗೆ
ಒಪ್ಪಿಸಲಾಗಿದೆ.
ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧಿಸಲಾಗಿರುವ ಮೊಹ್ಮದ್ ಹಕೀಂ ನನ್ನು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪಶ್ಚಿಮ ಬಂಗಾಲದ ಭಕ್ತಿನಗರ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ವ್ಯಾಪಕ ಜಾಲ ಬೀಸಿದ್ದ ಪೊಲೀಸರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಐದು ಬಾಂಬ್ ಗಳು, ಒಂದು ನಾಡ ಪಿಸ್ತೂಲ್, ಸ್ಫೋಟಕ ಸಾಮಗ್ರಿಗಳು ಹಾಗೂ ಅಮೋನಿಯಂ ರಸಾಯನಿಕವನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)