ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಉಲ್ಲಂಘನೆ ಮಾಡಿದ ಪಾಕ್ ಯೋಧರಿಂದ ದಾಳಿ

By Staff
|
Google Oneindia Kannada News

ಕುಪ್ವಾರಾ, ಜು. 30 : ಭಾರತ ಮತ್ತು ಪಾಕಿಸ್ತಾನದ ಗಡಿಭದ್ರತಾ ಅಧಿಕಾರಿಗಳ ಮಧ್ಯೆ ಶಾಂತಿ ಸಂಧಾನದ ಮಾತುಕತೆ ಮುಗಿದು ಇನ್ನು ಒಂದು ದಿನವೂ ಕಳೆದಿಲ್ಲ ಆಗಲೇ ಪಾಕಿಸ್ತಾನದ ಸೈನಿಕರು ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ ಪರಿಣಾಮ ಬುಧವಾರ ಮಧ್ಯಾಹ್ನ ಉಭಯ ದೇಶಗಳ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಬುಧವಾರ ಬೆಳಗ್ಗೆ ಸುಮಾರು 11.45ರ ಹೊತ್ತಿಗೆ ಪಾಕಿಸ್ತಾನದ 15 ಜನ ಸೈನಿಕರು ನರಿಯಾ ಚೆಕ್ ಪೋಸ್ಟ್ ದಾಟಿ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಭಾರತೀಯ ಸೈನಿಕರು ಎಚ್ಚತ್ತುಕೊಡು ಪಾಕಿಸ್ತಾನ ಮೇಲೆ ಗುಂಡಿನ ಮಳೆಗೆರೆದಿದ್ದಾರೆ. ಆಗ ಉಭಯ ದೇಶಗಳ ಸೈನಿಕರ ನಡುವೆ ಕೆಲ ಹೊತ್ತು ಗುಂಡಿನ ಚಕಮಕಿ ನಡೆಯಿತು. ಗಂಟೆಗಳ ನಂತರ ಪಾಕಿಸ್ತಾನದ ಸೈನಿಕರು ಅಲ್ಲಿಂದ ಕಾಲುಕಿತ್ತರು ಎಂದು ಗಡಿ ಭದ್ರತಾ ಪೊಲೀಸ್ ಮೂಲಗಳು ತಿಳಿಸಿವೆ. 2003ರಲ್ಲಿ ಗಡಿ ಉಲ್ಲಂಘನೆ ಮಾಡಬಾರದು ಎಂದು ಮಾಡಿಕೊಂಡಿರುವ ಒಪ್ಪಂದವನ್ನು ಪಾಕಿಸ್ತಾನ ಮತ್ತೆ ಮುರಿದಿದೆ.

ಕಳೆದ ಸೋಮವಾರ ಉಭಯ ದೇಶಗಳ ನಡುವೆ ಗುಂಡಿನ ಚಕಮಕಿ ನಡೆದ ಭಾರತದ ಒಬ್ಬ ಯೋಧ ಹುತಾತ್ಮನಾಗಿದ್ದ, ಪಾಕಿಸ್ತಾನದ ನಾಲ್ಕು ಜನರನ್ನು ಹೊಡೆದು ಉರುಳಿಸಲಾಗಿತ್ತು. ಸೋಮವಾರ ನಡೆದ ಭಾರತ ಮತ್ತು ಪಾಕಿಸ್ತಾನ ಸೈನಿಕರ ಗುಂಡಿನ ಕಾಳಗಕ್ಕೆ ಪ್ರತಿಕ್ರಿಯಿಸಿದ ಭಾರತೀಯ ರಕ್ಷಣಾ ಸಚಿವ ಎ.ಕೆ.ಎಂಟನಿ, ಪಾಕಿಸ್ತಾನ 2003ರ ಗಡಿಯಲ್ಲಿ ಶಾಂತಿ ಸಂಧಾನ ಒಪ್ಪಂದ ನಂತರ 19 ಸಲ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದೆ ಎಂದು ಸ್ಪಷ್ಟಪಡಿಸಿದ್ದರು. ನಿನ್ನೆಯಷ್ಟೇ ಅಧಿಕಾರಿಗಳ ವರ್ಗದಲ್ಲಿ ಗಡಿ ಉಲ್ಲಂಘನೆ ಮಾಡಬಾರದು ಎನ್ನುವ ಶಾಂತಿ ಸಂಧಾನ ಒಪ್ಪಂದ ಮಾಡಿಕೊಂಡಿರುವ ಬೆನ್ನಲ್ಲೇ ಮತ್ತೆ ಗಡಿ ಉಲ್ಲಂಘನೆ ಕೃತ್ಯ ನಡೆದಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X