ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೂರು ಪಾರು: ಪತ್ರಕರ್ತರ ಮೇಲೆ ಹಲ್ಲೆಗೆ ಖಂಡನೆ

By Staff
|
Google Oneindia Kannada News

ಚಿತ್ರದುರ್ಗ, ಜು.2: ಜಿಲ್ಲೆಯ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಪತ್ರಕರ್ತರು ಶಾಂತಿಯುತವಾಗಿ ಮಂಗಳವಾರ ಧರಣಿ ಮಾಡಿದರು. ನಾಲ್ಕು ದಿನಗಳ ಹಿಂದೆ ವಿಜಯ ಕರ್ನಾಟಕದ ಶಿವಪ್ರಸಾದ್, ಸಂಯುಕ್ತ ಕರ್ನಾಟಕದ ಎಂ.ಎಸ್.ಕರಿಬಸಪ್ಪ ಹಾಗೂ ಪ್ರಜಾವಾಣಿಯ ರೆಹಮತ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಹಲ್ಲೆಗೆ ಒಳಗಾಗಿರುವ ಪತ್ರಕರ್ತರು ಭರಮಸಾಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದಿದ್ದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಕೆಲವರು ಈ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿಸಿದರು.
****

ಮರಳಿ ಶಾಲೆಗೆ ಬನ್ನಿ
ಶಿರಸಿ, ಜು.2: ಉತ್ತರ ಕನ್ನಡ ಜಿಲ್ಲೆಯಲ್ಲಿ 560 ಮಂದಿ ಶಾಲೆ ಬಿಟ್ಟವರು ಸೇರಿದಂತೆ ಒಟ್ಟು 834 ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಅವರ ಪೋಷಕರು ಶಾಲೆಗೆ ಕಳುಹಿಸದೆ ಇರುವುದೇ ಇದಕ್ಕೆ ಕಾರಣ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಶಿರಸಿ ತಾಲೂಕಿನಲ್ಲಿ ಅತ್ಯಧಿಕ ಸಂಖ್ಯೆಯ 118 ಮಂದಿ ಮಕ್ಕಳಿದ್ದರೆ, ಕುಮಟಾದಲ್ಲಿ 17 ಮಂದಿ ಇದ್ದಾರೆ. ಜೋಯ್ಡಾದಲ್ಲಿ 117, ಹಳಿಯಾಳ 62, ಮುಂಡಗೋಡು 62, ಭಟ್ಕಳ 49, ಹೊನ್ನಾವರ 39, ಕಾರವಾರ 31, ಅಂಕೋಲ 27, ಯಲ್ಲಾಪುರ 19 ಮಕ್ಕಳು ಶಾಲೆಗೆ ಹೋಗುತ್ತಿಲ್ಲ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X