ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರ್ತಾ ಇಲಾಖೆ ನಿರ್ದೇಶಕರಾಗಿ ವಿಶುಕುಮಾರ್

By Staff
|
Google Oneindia Kannada News

ಬೆಂಗಳೂರು, ಜೂ.16: ವಾರ್ತಾ ಇಲಾಖೆಯ ನೂತನ ನಿರ್ದೇಶಕರಾಗಿ ಎನ್.ಆರ್. ವಿಶುಕುಮಾರ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಅವರು ಗುರುವಾರ (ಜೂ.12) ಅಧಿಕಾರ ವಹಿಸಿಕೊಂಡರು.

1992ರಲ್ಲಿ ಮೈಸೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ವಾರ್ತಾ ಇಲಾಖೆಗೆ ಸೇರಿದ 'ಜನಪದ' ಪತ್ರಿಕೆಯ ಸಂಪಾದಕರಾಗಿಯೂ ವಿಶುಕುಮಾರ್ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಕಂಠೀರವ ಸ್ಟುಡಿಯೋಸ್ (ಲಿ) ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಸಿದ್ದ ರಾಮಯ್ಯ ಅವರು ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದಾಗ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಅಂತರ್ಜಾಲತಾಣಕ್ಕೆ ಮೋಕ್ಷ ಎಂದು?
ವಾರ್ತಾ ಇಲಾಖೆಯಅಂತರ್ಜಾಲ ತಾಣಕ್ಕೊಮ್ಮೆ ಭೇಟಿ ಕೊಟ್ಟರೆ ಅಷ್ಟಾಗಿ ವಿಶೇಷತೆಗಳಿಲ್ಲದಿರುವುದು ಎದ್ದು ಕಾಣುತ್ತದೆ. ಅಂತರ್ಜಾಲ ಪುಟದ ಕೆಲವೊಂದು ಕೊಂಡಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.ಈ ಅಂತರ್ಜಾಲ ತಾಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕೆಂಬ ಇರಾದೆ ಸಹ ಸರ್ಕಾರಕ್ಕೆ ಇದ್ದಂತಿಲ್ಲ. ಅಂತರ್ಜಾಲತಾಣವನ್ನು ಹೊಸದಾಗಿ ರೂಪಿಸಿ ಇರುವ ಸಮಸ್ಯೆಗಳನ್ನು ಪರಿಹರಿಸಿ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಇದುವರೆಗೂ ಯೋಚಿಸಿದಂತಿಲ್ಲ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X