ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯ್ಮುಚ್ಕೊಂಡಿರಲು ಬಿಜೆಪಿ ನಾಯಕರಿಗೆ ಜೇಟ್ಲಿ ಸೂಚನೆ

By Staff
|
Google Oneindia Kannada News

Arun Jaitleyಬೆಂಗಳೂರು, ಜೂ. 8 : ಎಲ್ಲ ಶಾಸಕರನ್ನು ತೃಪ್ತಿಪಡಿಸದೇ ಬಿಜೆಪಿಯೇ ಮಾಡಿಕೊಂಡಿರುವ ಆಂತರಿಕ ಗಾಯದ ಮೇಲೆ ಪ್ರಮುಖ ಖಾತೆ ಸಿಗದ ಸಚಿವರು ಅಸಮಾಧಾನದ ಹುಳಿಯನ್ನು ಸುರಿಯುತ್ತಿರುವುದು ಬಿಜೆಪಿ ವರಿಷ್ಠರ ಕಣ್ಣು ಕೆಂಪಾಗಿಸಿದೆ.

ಸಚಿವ ಸ್ಥಾನ ಸಿಗದಿದ್ದುದಕ್ಕೆ ಮತ್ತು ನಿರೀಕ್ಷಿಸಿದ್ದ ಖಾತೆ ದೊರೆಯದಿದ್ದುದಕ್ಕೆ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವುದಾಗಲಿ ಮಾಡಬಾರದೆಂದು ಬಿಜೆಪಿಯ ಗೆಲುವಿನ ರೂವಾರಿಯಾಗಿದ್ದ ಅರುಣ್ ಜೇಟ್ಲಿ ಶಾಸಕರಿಗೆ ತಾಕೀತು ಮಾಡಿದ್ದಾರೆ.

ಆಯಕಟ್ಟಿನ ಖಾತೆ ದೊರೆಯದಿದ್ದುದಕ್ಕೆ ಕೆಲ ಸಚಿವರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿರುವುದು ವರಿಷ್ಠರನ್ನು ಪೇಚಿಗೆ ಸಿಲುಕಿಸಿದೆ. ನಾಯಿ ಬಾಲ ಯಾವತ್ತಿದ್ದರೂ ಡೊಂಕೇ ಎಂಬಂತೆ ಕೆಲ ಸಚಿವರು ಅತೃಪ್ತಿಯನ್ನು ಹೊರಗೆಡಹಿದ್ದಾರೆ.

ಸರ್ಕಾರದ ಸಕಾರಾತ್ಮಕ ಅಂಶಗಳನ್ನು ಮಾತ್ರ ಹೇಳಿಕೊಳ್ಳಬೇಕು. ನಕಾರಾತ್ಮಕ ಅಂಶಗಳನ್ನು ಹೊರಗೆಡಹದೇ ಬಾಯ್ಮುಚ್ಚಿ ಕುಳಿತುಕೊಳ್ಳಬೇಕು. ವರಿಷ್ಠರ ಕಟ್ಟಪ್ಪಣೆಯನ್ನೂ ಮೀರಿ ಯಾರಾದರೂ ಬಹಿರಂಗವಾಗಿ ಹೇಳಿಕೆ ನೀಡಿದ್ದೇ ಆದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜೇಟ್ಲಿ ಚಾಬೂಕು ಎತ್ತಿಕೊಂಡಿದ್ದಾರೆ. ವರಿಷ್ಠರಿಂದ ಸೂಚನೆ ಬರುತ್ತಿದ್ದಂತೇ ಬೂದಿ ಮುಚ್ಚಿದ ಕೆಂಡದಂತೆ ಸಚಿವರು ಒಳಗೊಳಗೇ ಬುಸುಗುಡುತ್ತಿದ್ದಾರೆ.

(ಏಜೆನ್ಸೀಸ್)

ಪೂರಕ ಓದಿಗೆ
ಅಸಮಾಧಾನಕ್ಕೆ ಕುಮ್ಮಕ್ಕು ನೀಡಿರುವ ಖಾತೆ ಹಂಚಿಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X