ವರುಣ ಕ್ಷೇತ್ರದ ಮತಗಟ್ಟೆ ಅಧಿಕಾರಿ ವಜಾ
ಬೆಂಗಳೂರು, ಮೇ 10: ವರುಣ ವಿಧಾನಸಭೆ ಕ್ಷೇತ್ರದ ಮತಗಟ್ಟೆ ಅಧಿಕಾರಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆಂದು ಬಿಜೆಪಿ ಆರೋಪಿಸಿರುವ ಹಿನ್ನಲೆಯಲಿ ಅವರನ್ನು ಇಂದು ವಜಾಮಾಡಲಾಗಿದೆ.
ಚುನಾವಣೆ
ಅಧಿಕಾರಿ
ಮಣಿವಣ್ಣನ್
ಅವರ
ಆದೇಶದಂತೆ
ಮತಗಟ್ಟೆ
ಅಧಿಕಾರಿಯನ್ನು
ವಜಾ
ಮಾಡಲಾಗಿದೆ.
ಹಾಗೆಯೇ
ಈ
ಮೊದಲು
ಬಳಸಿದಎಲೆಕ್ಟ್ರಾನಿಕ್
ಮತ
ಯಂತ್ರದ
ಜಾಗದಲ್ಲಿ
ಹೊಸ
ಮತ
ಯಂತ್ರವನ್ನು
ಇಡಲಾಗಿದೆ.
ಈ
ಮೊದಲು
ಬಳಸಿದ
ಮತಯಂತ್ರವನ್ನು
ಸೀಲ್
ಮಾಡಿ
ಸುರಕ್ಷಿತವಾಗಿಡಲಾಗಿದೆ
ಎಂದು
ಪೊಲೀಸರು
ತಿಳಿಸಿದರು.
ವರುಣಾ
ಕ್ಷೇತ್ರ
ಪ್ರತಿಷ್ಠಿತ
ಕಣವಾಗಿದ್ದು
ಕಾಂಗ್ರೆಸ್ನ
ಸಿದ್ದರಾಮಯ್ಯ,
ಬಿಜೆಪಿಯ
ಎಲ್.ರೇವಣಸಿದ್ದಯ್ಯ
ಹಾಗೂ
ಜೆಡಿಎಸ್ನ
ಎಚ್.ವಿ.ಕೃಷ್ಣಸ್ವಾಮಿ
ಸ್ಪರ್ಧೆಯಲ್ಲಿದ್ದಾರೆ.
ಚಿಕ್ಕಪೇಟೆ
ಕ್ಷೇತ್ರ
ಇದೀಗ
ತಾನೆ
ಬೆಂಗಳೂರಿನ
ಚಿಕ್ಕಪೇಟೆ
ವಿಧಾನಸಭೆ
ಕ್ಷೇತ್ರದಿಂದ
ಬಂದ
ಸುದ್ದಿ
ಹೀಗಿದೆ.
ನಕಲಿ
ಮತದಾನ
ಮಾಡಲು
ಮತಗಟ್ಟೆ
ಬಳಿ
ಜಮಾಯಿಸಿದ್ದ
ಗುಂಪನ್ನು
ಪೊಲೀಸರು
ಚದುರಿಸಿದರು.
ಉಳಿದಂತೆ
ಬೆಂಗಳೂರಿನ
ಕ್ಷೇತ್ರಗಳಲ್ಲಿ
ಮತದಾನ
ಬಹುತೇಕ
ಶಾಂತಿಯುತವಾಗಿ
ನಡೆಯುತ್ತಿದೆ.
ಎಲ್ಲೂ
ಅಹಿತಕರ
ಘಟನೆ
ವರದಿಯಾಗಿಲ್ಲ
ಎಂದು
ಉಪ
ಪೊಲೀಸ್
ಆಯುಕ್ತ
(ದಕ್ಷಿಣ
ವಿಭಾಗ)
ರವಿ
ತಿಳಿಸಿದರು.
ಚಿಕ್ಕಪೇಟೆ
ಕ್ಷೇತ್ರದಲ್ಲಿ
ಕಾಂಗ್ರೆಸ್ನ
ಆರ್.ವಿ.ದೇವರಾಜ್,
ಬಿಜೆಪಿಯ
ಹೇಮಚಂದ್ರ
ಸಾಗರ್
ಹಾಗೂ
ಜೆಡಿಎಸ್ನ
ಮುಜಾಮಿಲ್
ಅಹಮದ್
ನಡುವೆ
ತ್ರಿಕೋಣ
ಸ್ಪರ್ಧೆ
ಇದೆ.
ಸರ್ಕಾರಿ
ನೌಕರ
ಬಂಧನ
ಕಾಂಗ್ರೆಸ್
ಪರ
ಪ್ರಚಾರ
ಮಾಡುತ್ತಿದ್ದ
ಕಾರಣ
ಕೋಲಾರ
ಜಿಲ್ಲೆಯ
ಶ್ರೀನಿವಾಸಪುರ
ಕ್ಷೇತ್ರದಲ್ಲಿ
ಸರ್ಕಾರಿ
ನೌಕರರೊಬ್ಬರನ್ನು
ಪೊಲೀಸರು
ಬಂಧಿಸಿದ್ದಾರೆ.
ಸರ್ಕಾರಿ
ನೌಕರರು
ಯಾವುದೇ
ರಾಜಕೀಯ
ಪಕ್ಷದ
ಪರ
ಚುನಾವಣೆ
ಪ್ರಚಾರ
ಮಾಡುವಂತಿಲ್ಲ.
ಒಂದು
ವೇಳೆ
ಹಾಗೆ
ಮಾಡಿದರೆ
ಸರ್ಕಾರದ
ನೀತಿಯನ್ನು
ಉಲ್ಲಂಘಿಸಿದಂತಾಗುತ್ತದೆ.
(ದಟ್ಸ್ಕನ್ನಡ ವಾರ್ತೆ)