ಚಿತ್ರದುರ್ಗ, ದಕ್ಷಿಣ ಕನ್ನಡದಲ್ಲಿ ತಿರಸ್ಕೃತ ಅಭ್ಯರ್ಥಿಗಳು
ಬೆಂಗಳೂರು,ಮೇ1: ಚಿತ್ರದುರ್ಗದಲ್ಲಿ 22 ಅಭ್ಯರ್ಥಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದೆ. ಬುಧವಾರದ ಲೆಕ್ಕಾಚಾರದಂತೆ ಚಿತ್ರದುರ್ಗದಲ್ಲಿ ಒಟ್ಟು 170 ನಾಮಪತ್ರ ಸಲ್ಲಿಕೆಯಾಗಿತ್ತು. ದಕ್ಷಿಣ ಕನ್ನಡದಲ್ಲಿ 60 ನಾಮಪತ್ರಗಳು ಮಾತ್ರ ಪುರಸ್ಕೃತಗೊಂಡಿವೆ. ನಾಮಪತ್ರ ಹಿಂಪಡೆಯಲು ಶುಕ್ರವಾರ(ಮೇ.2) ಕಡೇ ದಿನವಾಗಿದೆ.
ಮೊಳಕಾಲ್ಮೂರು( 2), ಚಳ್ಳಕೆರೆಯ ಕಾಂಗ್ರೆಸ್ ನಜಗಳೂರಯ್ಯ ಬಿ ಫಾರಂ ಸಲ್ಲಿಸಲು ವಿಫಲ, ಚಿತ್ರದುರ್ಗ( 2)(ಬಿಎಸ್ಪಿ ಯ ಇಬ್ಬರು ಅಭ್ಯರ್ಥಿಗಳು), ಹೊಸದುರ್ಗ(1), ಬಳ್ಳಾರಿ ನಗರ(9), ಸಂಡೂರು (7), ಕೂಡ್ಲಿಗಿ ಹಾಗೂ ಕಂಪ್ಲಿ (6), ಹಡಗಲಿ(3), ಹಗರಿ ಬೊಮ್ಮನಹಳ್ಳಿ ಮತ್ತು ವಿಜಯನಗರ(ತಲಾ 2).
ಮೂಡಬಿದರೆ : ಬಿಜೆಪಿಯ ಭಾಸ್ಕರ್ ಹಾಗೂ ಸತೀಶ್ ಭಟ್ , ಮಂಗಳೂರು ಉತ್ತರ : ಮುಮ್ತಾಜ್ ಅಲಿ(ಕಾಂಗ್ರೆಸ್), ಎಂ.ಶಂಕರ್ ಭಟ್(ಬಿಜೆಪಿ), ಮಂಗಳೂರು ದಕ್ಷಿಣ : ಬಿಜೆಪಿಯ ಸತೀಶ್ ಪ್ರಭು, ಮಂಗಳೂರು : ಬಿಜೆಪಿಯ ಸಂತೋಷ್ ಕುಮಾರ್ ರೈ, ಬಂಟ್ವಾಳ : ಬಿಜೆಪಿಯ ಟಿ. ಬಂಗೇರಾ, ಜೆಡಿಎಸ್ನ ಮಹಮದ್ ಮತ್ತು ನಾರ್ಬಟ್ ರೋಡ್ರಿಕ್ಸ್, ಪುತ್ತೂರು : ಬಿಜೆಪಿಯ ಡಾ. ಎಂ. ಕೆ.ಪ್ರಸಾದ್, ಕಾಂಗ್ರೆಸ್ನ ನಬಿ. ಪುರುಷೋತ್ತಮ ರೈ ಹಾಗೂ ಸತೀಶ್ ನಾಯಕ್, ಸುಳ್ಯದಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡಿವೆ. ಉಡುಪಿ ಕ್ಷೇತ್ರಕ್ಕೆ ಸೇರಿದ ಕುಂದಾಪುರದಿಂದ ಬಿಜೆಪಿಯ ಮಣಿ ಗೋಪಾಲ್ , ಕಾರ್ಕಳದ ಬಿಎಸ್ ಪಿಯ ಕೆ. ಗಣೇಶ್, ಕಾಪುವಿನಿಂದ ಬಿಜೆಪಿಯ ಭಾಸ್ಕರ್ ಮೆಂಡನ್ , ಬೈಂದೂರುನಿಂದ ಬಿಜೆಪಿಯ ಬಾಬು ಶೆಟ್ಟಿ ಸೇರಿದಂತೆ ಮೂವರು ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ.
(ದಟ್ಸ್ ಕನ್ನಡ ವಾರ್ತೆ)