ರಾಯಚೂರು: 70 ಲಕ್ಷ ಅಕ್ರಮ ಹಣ ಪೊಲೀಸ್ ವಶ
ರಾಯಚೂರು,ಏ.22: ಮಹತ್ವದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಕಾರೊಂದರಲ್ಲಿ ಸಾಗಿಸುತ್ತಿದ್ದ 70 ಲಕ್ಷ ರುಪಾಯಿ ನಗದನ್ನು ತಾಲೂಕಿನ ಮುದುಗಲ್ ಗ್ರಾಮದಲ್ಲಿ ಇಂದು ಪೊಲೀಸ್ ರು ವಶಪಡಿಸಿಕೊಂಡಿದ್ದು, ವಾಹನ ಸೇರಿದಂತೆ ಮೊವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸ್ ರು, ಕಾರೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿರುವ ಹಣ ಐಎನ್ ಜಿ ವೈಶ್ಯ ಬ್ಯಾಂಕಿಗೆ ಸೇರಿದ್ದಾಗಿದೆ ಎಂದು ಪ್ರಥಮ ಹಂತದ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಹಣವನ್ನು ಇಳಕಲ್ ನಿಂದ ಬಳ್ಳಾರಿ ಜಿಲ್ಲೆಯ ಶಿರಗುಪ್ಪಕ್ಕೆ ತಗೆದುಕೊಂಡು ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳಿಂದ ತಿಳಿದು ಬಂದಿದೆ. ಐಎನ್ ಜಿ ವೈಶ್ಯ ಬ್ಯಾಂಕಿಗೆ ಸಂಬಂಧಿಸಿದ ಯಾರು ಖಚಿತ ದಾಖಲೆಗಳೊಂದಿಗೆ ಬಂದಿಲ್ಲ. ಆದ್ದರಿಂದ ಪ್ರಕರಣವನ್ನು ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಪೊಲೀಸ್ ರು ತಿಳಿಸಿದ್ದಾರೆ.
ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ರು, 70 ಲಕ್ಷ ಹಣ ಬಳ್ಳಾರಿ ಜಿಲ್ಲೆಯ ಕಡೆಗೆ ತೆರಳುತ್ತಿದರಿಂದ ಚುನಾವಣೆ ಇನ್ನೇನು ಕೆಲವೆ ದಿನಗಳು ಬಾಕಿ ಉಳಿದಿರುವುದರಿಂದ ಈ ಹಣ ಚುನಾವಣೆ ವೆಚ್ಚ ವಿನಿಯೋಗಿಸಲು ಸಾಗಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಕಾರಿನ ಚಾಲಕ ಜಗನ್ನಾಥ, ಸಿಬ್ಬಂದಿ ಎನ್ನಲಾದಜಿ. ಜಗನ್ನಾಥ ಶೆಟ್ಟಿ ಹಾಗೂ ಶಿವಶಾಂತಿ ಬಾಬು ಅವರನ್ನು ಬಂಧಿಸಲಾಗಿದೆ ಎಂದು ಪಿಎಸೈ ವೀರೇಶ್ ದೊಡ್ಡಮನಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)