ನೀತಿ ಸಂಹಿತೆ ಉಲ್ಲಂಘನೆ: 4489 ಆರೋಪಿಗಳ ಬಂಧನ
ಬೆಂಗಳೂರು,ಏ.23:
ಚುನಾವಣೆ
ನೀತಿ
ಸಂಹಿತೆ
ಉಲ್ಲಂಘಿಸಿರುವ
ಆರೋಪದ
ಮೇಲೆ
ರಾಜ್ಯದ್ಯಂತ
1977
ಪ್ರಕರಣಗಳು
ದಾಖಲಾಗಿದ್ದು,
ಒಟ್ಟು
4489
ಆರೋಪಿಗಳನ್ನು
ಬಂಧಿಸಲಾಗಿದೆ
ಎಂದು
ಪೊಲೀಸ್
ಮಹಾನಿರ್ದೇಶಕ
ಆರ್.
ಶ್ರೀನಿವಾಸನ್
ಬುಧವಾರ
ತಿಳಿಸಿದರು.
ಸುದ್ದಿಗಾರರೊಂದಿಗೆ
ಮಾತನಾಡುತ್ತಿದ್ದ
ಅವರು,
ಮುಖ್ಯವಾಗಿ
ರಾಜಕಾರಣಿಗಳ
ರಾಜಕೀಯ
ದೊಂಬರಾಟಕ್ಕೆ
ಕಡಿವಾಣ
ಹಾಕಲಾಗಿದ್ದು,
ಮತದಾರರನ್ನು
ಸೆಳೆಯಲು
ನಡೆಸಿದ
ಬಹುತೇಕ
ಎಲ್ಲ
ಪ್ರಯತ್ನಕ್ಕೆ
ಇಲಾಖೆ
ಯಾವುದೇ
ಆಸ್ಪದ
ನೀಡಿಲ್ಲ
ಎಂದು
ಹೇಳಿದರು.ಕೋಲಾರ,
ಮೈಸೂರು
ಮತ್ತು
ದಾವಣಗೆರೆಯಲ್ಲಿ
ಕೆಲ
ಅಭ್ಯರ್ಥಿಗಳು
ಸೀರೆ
ಹಂಚುವಿಕೆ
ಮತ್ತಿತರ
ಪ್ರಕರಣಗಳು
ಸೇರಿದಂತೆ
ಈಗಾಗಲೇ
ಒಂದೂವರೆ
ಕೋಟಿ
ರುಪಾಯಿ
ಮೌಲ್ಯದ
ಮದ್ಯ
ಮತ್ತು
ದಾಖಲೆಗಳಿಲ್ಲ
ನಾಲ್ಕು
ಕೋಟಿ
ಅಕ್ರಮ
ಹಣವನ್ನು
ವಶಪಡಿಸಿಕೊಳ್ಳಲಾಗಿದೆ
ಎಂದು
ಶ್ರೀನಿವಾಸನ್
ತಿಳಿಸಿದರು.
ನಾಮಪತ್ರ ಸಲ್ಲಿಕೆಯ ಅವಧಿಯ ಬಳಿಕ ಸೂಕ್ಷ್ಮ, ಅತೀಸೂಕ್ಷ್ಮ ಮತ ಕೇಂದ್ರಗಳನ್ನು ಪಟ್ಟಿ ಮಾಡಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ಇಲಾಖೆ ಪೂರ್ವ ತಯಾರಿ ನಡೆಸಿದೆ. ಭದ್ರತೆಗಾಗಿ ಕೇಂದ್ರದಿಂದ ಅರೆಸೇನಾ ಪಡೆಯನ್ನು ಕರೆಸಿಕೊಳ್ಳಲಾಗುವುದು ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)