ಕಾಸರಗೋಡಿನಲ್ಲಿ ಭುಗಿಲೆದ್ದ ಕೋಮು ಗಲಭೆ
ಕಾಸರಗೋಡು, ಏ.18: ಕಳೆದ ಎರಡು ದಿನಗಳಿಂದ ಕಾಸರಗೋಡು ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಎರಡು ದಿನಗಳಲ್ಲಿ ನಾಲ್ಕು ಕೊಲೆಗಳಾಗಿವೆ. ಸುಹಾಸ್,ಸಂದೀಪ್ ಮತ್ತು ಮೊಹಮ್ಮದ್ ಫಿನಾನ್ ಎಂಬವರೇ ಕೊಲೆಯಾದ ನತದೃಷ್ಟರು. ಇನ್ನೋರ್ವ ಮೃತ ವ್ಯಕ್ತಿಯನ್ನು ಗುರುತಿಸಲಾಗಿಲ್ಲ. ಈ ಕೊಲೆಗಳಿಗೆ ಹಳೇ ರಾಜಕೀಯ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಈ ಕೊಲೆಗಳು ಕೋಮು ಗಲಭೆಗೆ ತಿರುಗಿವೆ.
ಈ ಕೊಲೆಗಳಿಗೆ ಸಂಬಂಧಿಸಿದಂತೆ ಕಾಸರಗೋಡು ಬಳಿಯ ಅಂಬಾಲಫಾರಾದಲ್ಲಿ ಶುಕ್ರವಾರ ಬೆಳಗ್ಗೆ ಮೂವರು ಇರಿತಕ್ಕೆ ಒಳಗಾಗಿದ್ದಾರೆ. ರಶೀದ್(28), ಅಜೀಜ್(28) ಮತ್ತು ರಹೀಮ್(30) ಎಂಬುವರೆ ಇರಿತಕ್ಕೆ ಒಳಗಾದವರು. ಕಾರಿನಲ್ಲಿ ತೆರಳುತ್ತಿದ್ದ ಇವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಿವಿದು ಪರಾರಿಯಾಗಿದ್ದಾರೆ. ನಗರದಲ್ಲಿ ಅಲ್ಲಲ್ಲಿ ಇರಿತಕ್ಕೆ ಒಳಗಾದ 6 ಪ್ರಕರಣಗಳು ದಾಖಲಾಗಿವೆ. ಹಲವೆಡೆ ಮನೆಗಳಿಗೆ ಕಲ್ಲು ತೂರಾಟವನ್ನು ನಡೆಸಲಾಗಿದೆ. ಕಾಸರಗೋಡಿನಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.
ಘಟನೆಯ
ವಿವರ:
ವಕೀಲರಾದ
ಸುಹಾರ್(36)
ಎಂಬುವರನ್ನು
ದುಷ್ಕರ್ಮಿಗಳು
ಕಾಸರಗೋಡು
ಕೋರ್ಟ್
ರಸ್ತೆಯಲ್ಲಿನ
ವಿಆರ್ಎಲ್
ಕಚೇರಿ
ಬಳಿ
ಏ.17ರಂದು
ಸುಮಾರು
ಸಂಜೆ
5ಗಂಟೆಯ
ಸಮಯದಲ್ಲಿ
ಮಾರಾಕಾಸ್ತ್ರಗಳಿಂದ
ತಿವಿದು
ಪರಾರಿಯಾಗಿದ್ದರು.
ಸುಹಾಸ್
ಅವರಿಗೆ
ಪತ್ನಿ
ಹಾಗೂ
ನಾಲ್ಕುವರೆ
ವರ್ಷದ
ಪುತ್ರನಿದ್ದಾನೆ.
ಚಿಕಿತ್ಸೆಗಾಗಿ
ಮಂಗಳೂರಿನ
ಅತ್ತಾವರದ
ಕೆಎಂಸಿ
ಆಸ್ಪತ್ರೆಗೆ
ಸುಹಾಸ್
ಅವರನ್ನು
ಸಾಗಿಸಲಾಯಿತು.
ಆದರೆ
ತೀವ್ರ
ರಕ್ತಸ್ರಾವದ
ಕಾರಣ
ಅವರು
ಆಸ್ಪತ್ರೆಯಲ್ಲಿ
ಸಾವನ್ನಪ್ಪಿದರು.
ಕಾಸರಗೋಡಿನಲ್ಲಿ
ಬುಧವಾರ
ಕೊಲೆಯಾದ
ಯುವಕನೊಬ್ಬನ
ಕೊಲೆಗೆ
ಪ್ರತಿಕಾರವಾಗಿ
ಸುಹಾಸ್
ಕೊಲೆ
ನಡೆದಿದೆ
ಎನ್ನಲಾಗಿದೆ.
ಈ ಸಂಬಂಧ ಕಾಸರಗೋಡಿನಲ್ಲಿ ಕೋಮು ಗಲಭೆಗಳು ಭುಗಿಲೆದ್ದಿವೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ನಗರದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ. ಭಾನುವಾರದವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಜಿಲ್ಲಾಡಳಿತ ಶನಿವಾರ ಪರಿಶೀಲನೆ ನಡೆಸಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ನಿಷೇಧಾಜ್ಞೆಯನ್ನು ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ನಡೆದಿರುವ ಕೊಲೆಗಳು ಕೋಮು ಸಂವೇದನೆಯಿಂದ ಕೂಡಿರುವ ಕಾರಣ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಾಸರಗೋಡಿನ ಉಪ ಜಿಲ್ಲಾಧಿಕಾರಿ ಎ.ಟಿ.ಜೇಮ್ಸ್ ತಿಳಿಸಿದ್ದಾರೆ. ನಿಷೇಧಾಜ್ಞೆಯ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ಓಡಾಟ ಹಾಗೂ ಮದ್ಯದ ಅಂಗಡಿಗಳನ್ನು ರಾತ್ರಿ 8 ರಿಂದ ಬೆಳಗ್ಗೆ 6ಗಂಟೆಯ ತನಕ ಮೂರು ದಿನಗಳ ಕಾಲ ಮುಚ್ಚಲು ಆದೇಶಿಸಲಾಗಿದೆ.
ಸಂದೀಪ್ ಕೊಲೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆಯಾದ ಸಂದೀಪ್ ಬಿಜೆಪಿ ಕಾರ್ಯಕರ್ತನಾಗಿದ್ದ. ಸಂದೀಪ್ ಕೊಲೆಗೆ ಪ್ರತೀಕಾರವಾಗಿ ಮೊಹಮ್ಮದ್ ಫಿನಾನ್ (23) ಎಂಬವರನ್ನು ಬುಧವಾರ ದುಷ್ಕರ್ಮಿಗಳ ಗುಂಪು ಬಸ್ ನಿಲ್ದಾಣದಲ್ಲಿ ಕೊಲೆ ಮಾಡಿತ್ತು.
(ದಟ್ಸ್ಕನ್ನಡ ವಾರ್ತೆ)
ಬಿಜಿಪಿ ಕಾರ್ಯಕರ್ತನ ಕೊಲೆ; ಮಂಗಳೂರು ಉದ್ವಿಗ್ನ