ಮಂಗಳೂರಿನಲ್ಲಿ ಲಾರಿಯಲ್ಲಿ ತುಂಬಿದ್ದ ಅಕ್ರಮ ಸ್ಪಿರಿಟ್ ವಶ
ಮಂಗಳೂರು,ಏ.15: ಮಂಗಳೂರಿನ ತೊಕ್ಕೂಟ್ಟು ಬಳಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೋಲಿಸರು 13 ಲಕ್ಷ ರುಪಾಯಿಗಳ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮದ್ಯ ಸಾಗಿಸುತ್ತಿರುವ ನಿಖರ ಮಾಹಿತಿಯ ಆಧಾರದ ಮೇಲೆ ಕೇರಳದಿಂದ ತಮಿಳುನಾಡಿಗೆ ತೆರಳುತ್ತಿರುವ ಲಾರಿಯೊಂದನ್ನು ಅಡ್ಡಗಟ್ಟಿ ಮಂಗಳೂರಿನ ಸಿಸಿಬಿ ಪೋಲಿಸರು 13 ಲಕ್ಷ ರುಪಾಯಿಗಳ ಮೌಲ್ಯದ 350 ಕ್ಯಾನ್ ಗಳುಳ್ಳ ಅಕ್ರಮ ಸ್ಪಿರಿಟ್ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿಯ ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ.
ಕೇರಳ ರಾಜ್ಯಕ್ಕೆ ಸೇರಿದ ಲಾರಿ ಅಕ್ರಮ ಸ್ಪಿರಿಟ್ ತುಂಬಿಕೊಂಡು ತಮಿಳುನಾಡು ಕಡೆಗೆ ತರಳುತ್ತಿತ್ತು, ಚುನಾವಣೆ ಹತ್ತಿರವಾಗುಕ್ಕಿರುವ ಈ ಸಂದರ್ಭದಲ್ಲಿ ಮದ್ಯದ ಸರಬರಾಜು ತೀವ್ರಗೊಂಡಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಸಿಸಿಬಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಉಳ್ಳಾಲ ಪೋಲಿಸರಿಗೆ ಪ್ರಕರಣದ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ
ಚುನಾವಣೆ
ನಿಗದಿಯಾಗಿರುವ
ಕಾರಣ
ಗೋವಾ
ಸೇರಿದಂತೆ
ನೆರೆ
ರಾಜ್ಯಗಳಿಂದ
ಅಕ್ರಮ
ಮದ್ಯ
ಕರ್ನಾಟಕಕ್ಕೆ
ಹರಿದು
ಬರುತ್ತಿರುವುದರಿಂದ
ಇಂಥ
ಕಾರ್ಯಾಚರಣೆ
ಬಗ್ಗೆ
ಹದ್ದಿನ
ಕಣ್ಣಿಟ್ಟಿರಬೇಕೆಂದು
ಕೇಂದ್ರ
ಚುನಾವಣಾ
ಆಯೋಗ
ಕೂಡ
ಚುನಾವಣಾ
ವೀಕ್ಷಕರಿಗೆ
ನಿರ್ದೇಶನ
ನೀಡಿದೆ.
(ದಟ್ಸ್
ಕನ್ನಡ
ವಾರ್ತೆ)