ಧ್ವಜ ವಿವಾದ :ಚಿತ್ರದುರ್ಗದಲ್ಲಿ ಕೋಮು ಕಲಹ
ಚಿತ್ರದುರ್ಗ,ಏ.9: ಚಿತ್ರದುರ್ಗದ ಹೊರಭಾಗದಲ್ಲಿರುವ ಹೊಳಲ್ಕೆರೆ ರಸ್ತೆಯ ಗುಡ್ಡದ ಕೆಳಗಿನ ಚೌಕದಲ್ಲಿ ಧ್ವಜ ನೆಡುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಬುಧವಾರ ಬೆಳಗ್ಗೆ ಚಕಮಕಿ ನಡೆದಿದೆ. ಈ ಭಿನ್ನಾಭಿಪ್ರಾಯ ವಿವಾದಕ್ಕೆ ತಿರುಗಿದ್ದರಿಂದ ಎರಡೂ ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ತಲೆದೋರಿತು.
ಚಿತ್ರದುರ್ಗ ನಗರದ ಚೇಳುಗುಡ್ಡ ಚೌಕದಲ್ಲಿ ಧ್ವಜ ನೆಡಲು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮುಸ್ಲಿಂ ಮತ್ತು ಹಿಂದುಗಳ ನಡುವೆ ಜಗಳ ನಡೆಯಿತು. ಈ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ಕಲ್ಲು ತೂರಾಟ ನಡೆದಿದ್ದರಿಂದ ಘಟನಾ ಸ್ಥಳದಲ್ಲಿ ಕೆಲ ಕಾಲ ತ್ವೇಷಮಯ ವಾತಾವರಣ ಉಂಟಾಗಿತ್ತು.
ಪರಿಸ್ಥಿತಿಯನ್ನು
ತಿಳಿಗೊಳಿಸಲು
ಪೋಲಿಸರು
ಲಘು
ಲಾಠಿ
ಪ್ರಹಾರ
ನಡೆಸಿದ್ದು,
ಎರಡು
ಸುತ್ತಿನ
ಅಶ್ರುವಾಯು
ಪ್ರಯೋಗ
ನಡೆಸಿದ್ದಾರೆ.
ಪ್ರಕರಣಕ್ಕೆ
ಸಂಬಂಧಿಸಿದಂತೆ
ಪೋಲಿಸರು
ಮುಸ್ಲಿಂ
ಮುಖಂಡರನ್ನು
ಬಂಧಿಸಿದ್ದಾರೆ.
ಪರಿಸ್ಥಿತಿ
ಈಗ
ಹದ್ದುಬಸ್ತಿನಲ್ಲಿದೆ
ಎಂದು
ಜಿಲ್ಲಾ
ಪೊಲೀಸ್
ವರಿಷ್ಠಾಧಿಕಾರಿ
ತಿಳಿಸಿದ್ದಾರೆ.
(ಮಾಹಿತಿ
:
ಅರುಣಿ,
ಚಿತ್ರದುರ್ಗ)