ಏ.3ರಂದು ರಂಗ ಸಿಂಚನದಿಂದ ಲಂಕೇಶರ ನಾಟಕ
ಬೆಂಗಳೂರು, ಏ.2: ಮಲ್ಲೇಶ್ವರಂನಲ್ಲಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯದ ಹವ್ಯಾಸಿ ರಂಗತಂಡ 'ರಂಗ ಸಿಂಚನ' ಏಪ್ರಿಲ್ 3ರಂದು 'ದೊರೆ ಈಡಿಪಸ್' ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಿದೆ.
'ದೊರೆ ಈಡಿಪಸ್' ಗ್ರೀಕ್ ನಾಟಕ. ಇದನ್ನು ಪಿ.ಲಂಕೇಶ್ ಅವರು ಅಚ್ಚ ಕನ್ನಡ ಕಾವ್ಯ ಲಯದಲ್ಲಿ ಸೆರೆ ಹಿಡಿದಿದ್ದಾರೆ. ಈ ನಾಟಕ ಈಗಾಗಲೇ ಹಲವಾರು ಖ್ಯಾತನಾಮರ ಹಾಗೂ ಖ್ಯಾತ ರಂಗತಂಡಗಳಿಂದ ಪ್ರದರ್ಶನ ಕಂಡಿದೆ. ಈಗ 'ರಂಗ ಸಿಂಚನ'ದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ನಾಟಕದಲ್ಲಿ ಅಭಿನಯಿಸುತ್ತಿರುವುದು ವಿಶೇಷ.
ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಾವಿದ್ಯಾಲಯ ಹವ್ಯಾಸಿ ರಂಗತಂಡ 'ರಂಗ ಸಿಂಚನ'ವನ್ನು ಸ್ಥಾಪಿಸಿದೆ. ಈ ರಂಗತಂಡವು ಕಳೆದ ಏಳು ವರ್ಷಗಳಲ್ಲಿ ಹಲವಾರು ಮಹತ್ವದ ನಾಟಕಗಳನ್ನು ಪ್ರದರ್ಶಿಸಿ ರಂಗಾಸಕ್ತರ, ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿದೆ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು.
ಸಮಯ: ಸಂಜೆ 6.30
(ದಟ್ಸ್ಕನ್ನಡ ಸಭೆ-ಸಮಾರಂಭ)