ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ರಾಜ್ಯದ ಸಿಮಿ ಉಗ್ರರು

By Staff
|
Google Oneindia Kannada News

ಇಂದೋರ್, ಮಾ.28:ಕರ್ನಾಟಕ ಪೊಲೀಸರಿಗೆ ಜರೂರಾಗಿ ಬೇಕಾಗಿದ್ದ ಸಿಮಿ ಉಗ್ರರು ಸೇರಿದಂತೆ ಮಧ್ಯಪ್ರದೇಶ ಪೊಲೀಸರು ಮತ್ತು ಕೇಂದ್ರಿಯ ರಕ್ಷಣಾ ಪಡೆ ಯೋಧರು ಇಂದೋರ್ ಹಾಗೂ ಧಾರ್ ಜಿಲ್ಲೆಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದ13 ಮಂದಿ ನಾಯಕರನ್ನು ಸೆರೆಹಿಡಿದಿದ್ದಾರೆ.

2006ರ ಮುಂಬೈ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮಂಬೈ ಪೊಲೀಸರಿಗೆ ಬೇಕಾಗಿದ್ದ ಸಿಮಿ ನಾಯಕ ಶಿಬ್ಲಿ ಪೀದಿಕಾಲ್ ಅಬ್ದುಲ್ಲ(30), ಬೆಂಗಳೂರಿನಲ್ಲಿ ಸಂಘಟನೆಯ ಜಾಲ ಹೆಣೆಯುತ್ತಿದ್ದ ಮಾಜಿ ಸಿಮಿ ಮುಖ್ಯಸ್ಥ ಸಫ್ದರ್ ನಾಗೋರಿ ಮತ್ತವನ ಸಹೋದರ ಆಂಧ್ರ ಪದೇಶದ ಸಿಮಿ ಸಂಘಟನೆಯ ಮುಖ್ಯಸ್ಥ ಕಮ್ರುದ್ದೀನ್, ಕರ್ನಾಟಕದ ಹಫೀಜ್(24) ಮತ್ತು ಮುಜಾಮಿಲ್ ಅತಾ ಉರ್ ರೆಹಮಾನ್ ಶೇಖ್ ಬಂಧಿತ ಸಿಮಿ ಉಗ್ರರು.

ಬಂಧಿತರ ಬಳಿ ಶಸ್ತ್ರಾಸ್ತ್ರ, ಕಂಪ್ಯೂಟರ್ ಹಾಗೂ ದಾಖಲೆ ಪತ್ರಗಳು ಪತ್ತೆಯಾಗಿವೆ. ಶಿಬ್ಲಿ ಮತ್ತು ಬೆಂಗಳೂರು ನಿವಾಸಿ ಮುಜಾಮಿಲ್ ಅತಾ ಉರ್ ರೆಹಮಾನ್ ಶೇಖ್ 2006ರ ಮುಂಬೈ ಸ್ಪೋಟದ ಆರೋಪಿಗಳಾಗಿದ್ದಾರೆ. ಹಫೀಜ್ ಅಲಿಯಾಸ್ ಅದ್ನಾನ್ ಕರ್ನಾಟಕದ ಬಿಜಾಪುರ ನಿವಾಸಿಯಾಗಿದ್ದು, ಈತ ಗೋವಾ ಮತ್ತು ಮುಂಬೈಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಕೈಗೊಳ್ಳಲು ಉಗ್ರರ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ. ಈ ಬಗ್ಗೆ ಕರ್ನಾಟಕದಲ್ಲಿ ಬಂಧನಕ್ಕೆ ಒಳಗಾಗಿರುವ ಸಿಮಿ ಉಗ್ರ ನಾಸಿರ್ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದ.

ಸಿಮಿ ಉಗ್ರರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಶಿಬ್ಲಿಯನ್ನು ತನಿಖೆಗೆ ಒಳಪಡಿಸಲು ಕರ್ನಾಟಕ ಪೊಲೀಸರ ತಂಡವೊಂದು ಮಧ್ಯಪ್ರದೇಶಕ್ಕೆ ತೆರಳಿದೆ ಎಂದು ಕರ್ನಾಟಕ ಡಿಜಿಪಿ ಕೆ.ಆರ್.ಶ್ರೀನಿವಾಸನ್ ತಿಳಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X