ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತರ ಬಲೆಗೆ ಬಿದ್ದ ಇನ್ನೊಬ್ಬ ಅಧಿಕಾರಿ

By Staff
|
Google Oneindia Kannada News

ಬೆಂಗಳೂರು, ಮಾ.28 : ಲಂಚ ಸ್ವೀಕರಿಸುತ್ತಿದ್ದ ಶ್ರೀರಂಗಪಟ್ಟಣದ ಸರ್ವೇಕ್ಷಣಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.

ಜಮೀನಿಗೆ ಸಂಬಂಧಿಸಿದ ದಾಖಲೆ ನೀಡಲು ಮಂಡ್ಯದ ಲೋಕೇಶ್ ಅವರಿಂದ ಕೆಂಪೇಗೌಡ ಎಂಬ ಅಧಿಕಾರಿ 2 ಸಾವಿರ ರು. ಕೇಳಿದ್ದ. ಚೌಕಾಶಿಯ ನಂತರ 1500 ರು. ಸ್ವೀಕರಿಸಲು ಒಪ್ಪಿಕೊಂಡಿದ್ದ. ಲೋಕೇಶ್ ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸರು ಕೆಂಪೇಗೌಡ ಲಂಚ ಸ್ವೀಕರಿಸುತ್ತಿದ್ದಾಗಲೇ ಆತನನ್ನು ಬಂಧಿಸಿದರು.

ಲೈಂಗಿಕ ಕಾರ್ಯಕರ್ತೆಯರ ಸಮಾವೇಶ

ಬೆಂಗಳೂರು, ಮಾ.28 : ಎರಡು ದಿನಗಳ ಲೈಂಗಿಕ ಕಾರ್ಯಕರ್ತೆಯರ ಸಮ್ಮೇಳನ ನಗರದಲ್ಲಿ ಮಾರ್ಚ್ 29ರಿಂದ ಆರಂಭವಾಗಲಿದೆ.

ಬೆಂಗಳೂರು ಮೂಲದ ಎನ್‌ಜಿಓ ಸುರಕ್ಷಾ ಈ ಸಮ್ಮೇಳನವನ್ನು ಆಯೋಜಿಸಿದ್ದು, ಬೆಂಗಳೂರು ನಗರ ಮತ್ತು ಗ್ರಾಮೀಣ, ಹಾಗು ರಾಮನಗರ ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ. ಲೈಂಗಿಕತೆಯ ಬಗ್ಗೆ ತಿಳಿವಳಿಕೆ ಮೂಡಿಸುವ, ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಅಂಟಿರುವ ಕಳಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ ಎಂದು ಸುರಕ್ಷಾದ ಕಾರ್ಯಕಾರಿ ನಿರ್ದೇಶಕಿ ಮ್ಯಾಗಿ ಥಾಮಸ್ ಶುಕ್ರವಾರ ತಿಳಿಸಿದರು.

ಭೀಕರ ಅಪಘಾತ, ಸ್ಥಳದಲ್ಲೇ ಐವರ ಸಾವು

ಮಂಡ್ಯ, ಮಾ.28 : ವೇಗವಾಗಿ ಬರುತ್ತಿದ್ದ ಮರಳು ತುಂಬಿದ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮವಾಗಿ ಮಳವಳ್ಳಿ ಬಳಿ ಶುಕ್ರವಾರ ಬೆಳಗಿನ ಜಾವದಲ್ಲಿ ಐವರು ಸಾವನ್ನಪ್ಪಿದ್ದಾರೆ.

ದೊಡ್ಡಹಳ್ಳಿ ಗ್ರಾಮದಿಂದ ಹೊಸಹಳ್ಳಿ ಗ್ರಾಮಕ್ಕೆ ಪಂಕ್ಚರ್ ಆದ ಸ್ಕೂಟರನ್ನು ತಳ್ಳಿಕೊಂಡು ಬರುತ್ತಿದ್ದ ಇಬ್ಬರ ಮೇಲೆ ಹಾಯ್ದ ನಂತರ ಲಾರಿ ಮುಗುಚಿಬಿದ್ದು ಹಾದಿಬದಿ ನಿಂತಿದ್ದ ಮೂವರನ್ನು ಬಲಿ ತೆಗೆದುಕೊಂಡಿದೆ. ಡಿಕ್ಕಿ ಹೊಡೆದ ಕೂಡಲೆ ಲಾರಿ ಚಾಲಕ ಪರಾರಿಯಾಗಿದ್ದಾನೆ.

ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಓರ್ವ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತರನ್ನು ಶಿವಕುಮಾರ್(22), ರಮೇಶ್(25), ಸಣ್ಣೇಗೌಡ(24), ಸಿದ್ದೇಗೌಡ(40) ಮತ್ತು ಬಸವಣ್ಣ(25) ಎಂದು ಗುರುತಿಸಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X