ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೋಳಿ ಸಂದರ್ಭದಲ್ಲಿ ಗಲಭೆ : ಆಳಂದದಲ್ಲಿ ನಿಶೇಧಾಜ್ಞೆ
ಕಲಬುರ್ಗಿ, ಮಾ.23 : ಹೋಳಿಯಾಚರಣೆಯ ಸಂದರ್ಭದಲ್ಲಿ ಉದ್ಭವಿಸಿರುವ ಮತೀಯ ಕಲಹವನ್ನು ಹತ್ತಿಕ್ಕಲು ಸೋಮವಾರದವರೆಗೆ ಆಳಂದದಲ್ಲಿ ಅಪರಾಧಿ ಪ್ರಕ್ರಿಯಾ ಸಂಹಿತೆಯ 144ನೇ ಸೆಕ್ಷನ್ ಅಡಿ ನಿಶೇಧಾಜ್ಞೆ ಜಾರಿ ಮಾಡಲಾಗಿದೆ.
ಓಕುಳಿಯಾಡುತ್ತಿದ್ದ ಒಂದು ಗುಂಪು ಮತ್ತೊಂದು ಕೋಮಿನ ಪ್ರಾರ್ಥನಾ ಸ್ಥಳದ ಮೇಲೆ ರಂಗನ್ನು ಎರಚಿದ್ದು ಕಲಹಕ್ಕೆ ನಾಂದಿ ಹಾಡಿತು. ಇದರಿಂದ ರೊಚ್ಚಿಗೆದ್ದ ಆ ಕೋಮಿನ ಜನ ಓಕುಳಿಯಾಡುತ್ತಿದ್ದ ಗುಂಪಿನ ಮೇಲೆ ಕಲ್ಲು ತೂರಲು ಪ್ರಾರಂಭಿಸಿತು. ಗಾಯಗೊಂಡ ಗುಂಪು ಆ ಕೋಮಿನ ವಿರುದ್ಧ ತಿರುಗಿ ಬಿದ್ದಿದ್ದರಿಂದ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗಲಭೆಯಲ್ಲಿ ಕೆಎಸ್ಆರ್ಟಿಸಿಗೆ ಸೇರಿದ ಒಂದು ಬಸ್ಸನ್ನು ಸುಟ್ಟುಹಾಕಲಾಗಿದೆ. ಸಕಾಲಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ನಷ್ಟವನ್ನು ತಪ್ಪಿಸಿದರು. ಗಲಭೆಯಲ್ಲಿ ಭಾಗಿಯಾಗಿರುವ 21 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ನ್ಯಾಯಾಧೀಶರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
(ಯುಎನ್ಐ)
Comments
Story first published: Sunday, March 23, 2008, 17:35 [IST]