ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.19ರಂದು ಅತ್ತಿಗುಪ್ಪೆಯಲ್ಲಿ ಬ್ರಹ್ಮರಥೋತ್ಸವ

By Staff
|
Google Oneindia Kannada News

ಬೆಂಗಳೂರು, ಮಾ.18: ಬೆಂಗಳೂರಿನ ವಿಜಯನಗರ 2ನೇ ಹಂತ ಅತ್ತಿಗುಪ್ಪೆಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವರ ಬ್ರಹ್ಮರಥೋತ್ಸವವನ್ನು ಏರ್ಪಡಿಸಲಾಗಿದೆ.

ಬುಧವಾರ ಬೆಳಗ್ಗೆ 9ಗಂಟೆಗೆ ಲಕ್ಷ್ಮಿನರಸಿಂಹ ಸ್ವಾಮಿಗೆ ಅಭಿಷೇಕ, ರಾತಿ 9ಗಂಟೆಗೆ ಗಜೇಂದ್ರ ಮೋಕ್ಷ, ಮಾ.20ರಂದು ಯಾತ್ರಾದಾನ ಸೇವೆ, ನಿವೇದನಾ ಕೈಂಕರ್ಯ, ಮಧ್ಯಾಹ್ನ 1ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ.ಸೊಮಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಕೃಷ್ಣಪ್ಪ, ಸಂಸದ ಅನಂತಕುಮಾರ್, ಎಚ್.ಎಂ.ರೇವಣ್ಣ, ಮಾಜಿ ಉಪ ಮಹಾಪೌರ ಎಂ.ಲಕ್ಷ್ಮಿನಾರಾಯಣ, ಪಾಲಿಕೆ ಮಾಜಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ, ಸಂಜೆ 5ಗಂಟೆಗೆ ರಥಾವರೋಹಣೋತ್ಸವ, ರಾತ್ರಿ 7ಕ್ಕೆ ಮಹಾಮಂಗಳಾರತಿ, ರಾತ್ರಿ 9ಕ್ಕೆ ಮಣೇವು ಸೇವೆ ನಡೆಯಲಿದೆ. ರಾತ್ರಿ 11ಗಂಟೆಗೆ ಹೂವಿನ ಪಲ್ಲಕ್ಕಿ ಉತ್ಸವವನ್ನು ಏರ್ಪಡಿಸಲಾಗಿದೆ. ಮಾ.22ರಂದು ಹಂಸವಾಹನೋತ್ಸವ ನೆರವೇರಲಿದೆ. ಮಾ.23ರಂದು ರಾತ್ರಿ ಶಯನೋತ್ಸವ, ಮಾ.24ರಂದು ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X