ಸೋಮವಾರ ಸಂಸತ್ತಿನಲ್ಲಿ ರಾಜ್ಯ ಬಜೆಟ್ ಮಂಡನೆ
ಬೆಂಗಳೂರು, ಮಾ.07 : 2008 ಮತ್ತು 2009ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸೋಮವಾರ ಮಾರ್ಚ್ 10ರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತಿದೆ ಎಂದು ಕರ್ನಾಟಕ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದ್ದಾರೆ.
ರಾಜ್ಯ ರಾಷ್ಟ್ರಪತಿ ಆಳ್ವಿಕೆಯಲ್ಲಿರುವುದರಿಂದ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ರಾಜ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಬಜೆಟ್ಟಲ್ಲಿ ಬಡತನ ನಿರ್ಮೂಲನೆ, ಗ್ರಾಮೀಣ ಉದ್ಯೋಗ, ನೀರಾವರಿ, ವಿದ್ಯುತ್, ನಗರ ಮತ್ತು ಗ್ರಾಮೀಣ ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಬೇಸಿಗೆ ಕಾಲಿಟ್ಟಿದ್ದು ನೀರಿನ ಕೊರತೆಯಿರುವ ಜಿಲ್ಲೆಗಳಲ್ಲಿ ಬೆಳೆಯಿಲ್ಲದೇ ಕಂಗಾಲಾಗಿರುವ ರಾಜ್ಯದ ರೈತರು ತಮಗೆ ಏನು ಸಿಗಬಹುದೆಂದು ಕಾದು ಕುಳಿತಿದ್ದಾರೆ. ಕೇಂದ್ರ ಬಜೆಟ್ನಲ್ಲಿ ರೈತರ ಸಾಲ ಮನ್ನಾ ಮಾಡಿರುವುದರಿಂದ ರಾಜ್ಯದ ರೈತರಿಗೆ 60 ಸಾವಿರ ಕೋಟಿಯಲ್ಲಿ ಎಷ್ಟು ಪಾಲು ಸಿಗಬಹುದೆಂಬ ನಿರೀಕ್ಷೆಯಿಂದ ರೈತರು ಕಾಯುತ್ತಿದ್ದಾರೆ. ಆಂಧ್ರಪ್ರದೇಶ ಬಿಟ್ಟರೆ ರಾಜ್ಯದಲ್ಲಿಯೇ ಹೆಚ್ಚಿನ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
(ಯುಎನ್ಐ)
ಪೂರಕ
ಓದಿಗೆ
ಕೇಂದ್ರ
ಬಜೆಟ್
2008-09
:
ಪೂರ್ಣ
ವಿವರ
ಸಣ್ಣ
ಮತ್ತು
ಮಧ್ಯಮ
ರೈತರ
ಸಾಲ
ಸಂಪೂರ್ಣ
ಮನ್ನಾ