ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಗ್ರ ಆಸೀಫ್ಗೆ ಜಾಮೀನು; ರಾಮಸೇನೆ ವಿರೋಧ
ಹುಬ್ಬಳ್ಳಿ, ಫೆ.11: ಮೊಹಮ್ಮದ್ ಅನ್ವರ್ ಎಂಬ ವಕೀಲರು ಶಂಕಿತ ಉಗ್ರವಾದಿ ಮೊಹಮ್ಮದ್ ಆಸೀಫ್ ಪರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದನ್ನು ತೀವ್ರ ವಿರೋಧಿಸಲಾಗಿದೆ. ಈ ಸಂಬಂಧ ಸಹೋದ್ಯೋಗಿ ವಕೀಲರು ಸೋಮವಾರ ಪ್ರತಿಭಟಿಸಿ ನ್ಯಾಯಾಲಯನ್ನು ಬಹಿಷ್ಕರಿಸಿದರು.
ಸೋಮವಾರ ಹುಬ್ಬಳ್ಳಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಬಂದ ಆಸೀಪ್ ಪರ ವಕೀಲರನ್ನು ಸಹೋದ್ಯೋಗಿ ವಕೀಲರು ತಡೆದು ಪ್ರತಿಭಟಿಸಿದರು.ವಕೀಲ ಮೊಹಮ್ಮದ್ ಅನ್ವರ್ ವಿರುದ್ಧ ರಾಮಸೇನಾ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು. ಇಂದು ಅವರನ್ನು ಕೋರ್ಟ್ನ ಆವರಣದೊಳಗೆ ಪ್ರವೇಶಿಸದಂತೆ ತಡೆಯುವಲ್ಲಿ ಅವರು ಯಶಸ್ವಿಯಾದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲಾ ರಾಮಸೇನಾ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದ್ದಾರೆ.
ಸಿಒಡಿ ಪೊಲೀಸರು ಈಗಾಗಲೇ ಶಂಕಿತ ಉಗ್ರವಾದಿ ಮೊಹಮ್ಮದ್ ಆಸೀಫ್ಗೆ ಜಾಮೀನು ಕೊಡಬಾರದೆಂದು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶರು ಇವರ ಅಹವಾಲನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ.
(ದಟ್ಸ್ಕನ್ನಡ ವಾರ್ತೆ)
Comments
Story first published: Monday, February 11, 2008, 19:27 [IST]