ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿ ಯಶವಂತ ಚಿತ್ತಾಲರಿಗೆ ಪಂಪ ಪ್ರಶಸ್ತಿ?

By Staff
|
Google Oneindia Kannada News

ಸಾಹಿತಿ ಯಶವಂತ ಚಿತ್ತಾಲರಿಗೆ ಪಂಪ ಪ್ರಶಸ್ತಿ?ಬೆಂಗಳೂರು, ಫೆ.07: ರಾಜ್ಯದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಕನ್ನಡದ ಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲರ ಹೆಸರನ್ನು ಜಿ.ಎಸ್.ಆಮೂರ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ.

ಚಿತ್ತಾಲರ "ಕಥೆಯಾದಳು ಹುಡುಗಿ" ಎಂಬ ಕೃತಿಗೆ 1983ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ "ಶಿಕಾರಿ" ಕಾದಂಬರಿಗೆ 1979ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ಲಭಿಸಿದೆ. ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನಿರಂಜನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಚಿತ್ತಾಲರ ಸಾಹಿತ್ಯ ಕೃಷಿಗೆ ಲಭಿಸಿವೆ.

ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ತಾಲ್ಲೂಕಿನ, "ಹನೇಹಳ್ಳಿ," ಯಲ್ಲಿ ಹುಟ್ಟಿದ ಚಿತ್ತಾಲರ ಮಾತೃಭಾಷೆ ಕೊಂಕಣಿ. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, ಧಾರವಾಡ, ಮುಂಬೈ ಮುಂತಾದ ಕಡೆಗಳಲ್ಲಿ. ಸಹೋದರ ಗಂಗಾಧರ ಚಿತ್ತಾಲ ಸೇರಿದಂತೆ ಶಾಂತಿನಾಥ ದೇಸಾಯಿ, ಮತ್ತು ಗೌರೀಶಕಾಯ್ಕಿಣಿ ಅವರು ಚಿತ್ತಾಲರ ಬದುಕಿನಲ್ಲಿ ಪ್ರಭಾವ ಬೀರಿದ ಸಾಹಿತಿಗಳು. ಪಾಲಿಮರ್ ಟೆಕ್ನಾಲಜಿ ಓದಿದ ಚಿತ್ತಾಲರು ನೆಲೆಸಿದ್ದು ಮುಂಬೈಯಲ್ಲಿ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X