ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವನಾಥ್ ಮಾನಸಿಕ ರೋಗಿ : ಡಿಕೆಶಿ ವ್ಯಂಗ್ಯ

By Staff
|
Google Oneindia Kannada News

DK Shiavakumar pooh poohs Vishwanaths claimsಬೆಂಗಳೂರು, ಜ. 28 :ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕೆಂದು ಕಾಂಗ್ರೆಸ್ಸಿನವರೇ ಆದ ಇನ್ನೊಬ್ಬ ಮಾಜಿ ಸಚಿವ ಮತ್ತು ಕೃಷ್ಣ ಅವರ ಆಪ್ತ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಎಸ್. ಎಂ. ಕೃಷ್ಣ ಮತ್ತು ಬಿ. ಸರೋಜಾದೇವಿ ಅವರ ಖಾಸಗಿ ಬದುಕಿನ ಗುಪ್ತ ವಿವರಗಳಿರುವ ಪುಸ್ತಕ ಬಿಡುಗಡೆಗೆ ಸಮಾರಂಭಕ್ಕೆ ಬೆಂಗಳೂರು ಮೈಸೂರು ರಸ್ತೆಯ ಕೆಲವೆಡೆಗಳಲ್ಲಿ ಸೋಮವಾರ ಸಂಜೆ ಭಾರೀ ವಿರೋಧ ವ್ಯಕ್ತವಾಗಿದೆ. ಮೈಸೂರು ಮತ್ತು ಮಂಡ್ಯದಲ್ಲಿ ಕೃಷ್ಣ ಬೆಂಬಲಿಗರು ವಿಶ್ವನಾಥ್ ಪ್ರತಿಕೃತಿಯನ್ನು ಧಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃತಿ ಬಿಡುಗಡೆ ಮಾಡಬಾರದು ಮತ್ತು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರಿಂದ ಮೈಸೂರಿನಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಕೃತಿಯ ಹೆಸರು "ಹಳ್ಳಿ ಹಕ್ಕಿಯ ಹಾಡು". ಕೃತಿ ಬಿಡುಗಡೆಗೆ ಸೋಮವಾರ ಸಂಜೆ ಮೈಸೂರಿನಲ್ಲಿ ವೇದಿಕೆ ಸಜ್ಜಾಗಿದೆ.

ಮಂಡ್ಯ ಮತ್ತು ಮದ್ದೂರು ನಗರಗಳಲ್ಲಿ ಕೃತಿ ಬಿಡುಗಡೆಯ ತೋರಣಗಳನ್ನು ಪ್ರತಿಭಟನಕಾರರು ಹರಿದುಹಾಕಿದ್ದಾರೆ. ಮೈಸೂರಿನಲ್ಲಿ ಪುಸ್ತಕ ಬಿಡುಗಡೆಯ ಸ್ಥಳ ರಾಣಿ ಬಹಾದ್ದೂರ್ ಸಭಾಂಗಣಕ್ಕೆ ಪೊಲೀಸ್ ಬಂದೋಬಸ್ತ್ ಮಾಡನಾಗಿದೆ.

ಇದೇ ವೇಳೆ, ರಾಜ್ಯದಲ್ಲಿ ಎದ್ದಿರುವ ಕೃಷ್ಣ-ಸರೋಜಾ ಪ್ರಸಂಗದ ಸುದ್ದಿಗೆ "ವೈಯಕ್ತಿಕ ವಿಚಾರಗಳಿಗೆ ಪ್ರತಿಕ್ರಯಿಸುವುದಿಲ್ಲ" ಎಂದು ಸರೋಜಾದೇವಿಯವರು ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿರುವ ಚುಟುಕು ಹೇಳಿಕೆ ನೀಡಿದ್ದಾರೆ. ಕೃಷ್ಣ ಅವರ ಹೇಳಿಕೆ ಏನು ಎನ್ನುವುದನ್ನು ತಿಳಿಯುವುದಕ್ಕೆ ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಕೃಷ್ಣ ಸರೋಜಾದೇವಿ ಪ್ರಣಯಪ್ರಸಂಗದ 'ವಿಶ್ವ'ರೂಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X